Advertisement

ಮಂಡ್ಯದಲ್ಲಿ ಜೆಡಿಎಸ್‌ಗ್ಯಾಕೆ ಭಯ?;ನಿಖಿಲ್‌ಗೆ ಮಾದೇಗೌಡ ಗುಡ್‌ಲಕ್‌ 

01:31 PM Mar 16, 2019 | Team Udayavani |

ಮಂಡ್ಯ : ಇಡೀ ರಾಜ್ಯದಲ್ಲೇ ಹೈ ವೋಲ್ಟೇಜ್‌  ಕದನಕ್ಕೆ ಸಾಕ್ಷಿಯಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ದಿನದಿಂದ ಗರಿಗೆದರುತ್ತಿದ್ದು, ಶನಿವಾರ ಸುಮಲತಾ ಅಂಬರೀಶ್‌ ಅವರು ನನ್ನನ್ನು ಕಂಡರೆ ಜೆಡಿಎಸ್‌ಗ್ಯಾಕೆ ಭಯ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಮಾಜಿ ಸಂಸದ, ಕಾಂಗ್ರೆಸ್‌ ನಾಯಕ ಮಾದೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬೆಂಬಲ ಯಾಚಿಸಿದ್ದಾರೆ. 

Advertisement

ಕೆ.ಆರ್‌.ಪೇಟೆಯಲ್ಲಿ  ಪ್ರಚಾರ ನಿರತರಾಗಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಜೆಡಿಎಸ್‌ಗೆ ಎಂಟಕ್ಕೆ ಎಂಟೂ ಶಾಸಕರ ಬಲವಿದೆ, ಮೂವರು ಸಚಿವರಿದ್ದಾರೆ. ವಿಧಾನಪರಿಷತ್‌ ಸದಸ್ಯರಿದ್ದಾರೆ.ಅವರಿಗೇಕೆ ನನ್ನನ್ನು ಕಂಡರೆ ಭಯ? ಅವರು ಸಲೀಸಾಗಿ ಗೆದ್ದು ಬರಬಹುದಲ್ಲಾ ಎಂದು ಪ್ರಶ್ನಿಸಿದರು. 

ಮರಿಗೌಡರಿಗೆ ಮಾದೇಗೌಡರ ಬಲ 
ನಿಖಿಲ್‌ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಮಾಜಿ ಸಂಸದ ಮಾದೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಬೆಂಬಲ ಯಾಚಿಸಿದರು. 

ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿರುವ ನಿಖಿಲ್‌ ಕುಮಾರ್‌ಗೆ ನಾನು ಆಶೀರ್ವಾದ ಮಾಡಿದ್ದೇನೆ ಎಂದು ಮಾಧ್ಯಮ ಪ್ರತಿನಿಧಿಗಳ ಎದುರು ಮಾದೇಗೌಡ ಹೇಳಿಕೆ ನೀಡಿದ್ದಾರೆ. 

ಗುಡ್‌ಲಕ್‌ ಆಗಬೇಕಂದ್ರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮಾದೇಗೌಡರು ನಿಖಿಲ್‌ಗೆ ಇದೇ ವೇಳೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

Advertisement

ಮಾದೇ ಗೌಡ ಅವರನ್ನು ಸುಮಲತಾ  ಅವರು ಎರಡು ದಿನಗಳ ಹಿಂದೆ ಭೇಟಿಯಾಗಿದ್ದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಬೆಂಬಲ 
ಪಕ್ಷೇತರವಾಗಿ ಕಣಕ್ಕಿಳಿದರೆ ಸಮಲತಾ ಅವರನ್ನು ಬೆಂಬಲಿಸುವುದಾಗಿ ಕೆ.ಆರ್‌.ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next