Advertisement

ಅಪಘಾತದಂತೆ ಬಿಂಬಿಸಿ ವ್ಯಕ್ತಿಯ ಕೊಲೆ ; ಇಬ್ಬರ ಬಂಧನ : ಕೊಲೆಗೆ ಕಾರಣವಾಯ್ತು ಅಕ್ರಮ ಸಂಬoಧ

07:57 PM May 25, 2021 | Team Udayavani |

ಮಂಡ್ಯ: ಮೇ 22ರಂದು ಶ್ರೀರಂಗಪಟ್ಟಣ ತಾಲೂಕಿನ ಹೊಂಗಳ್ಳಿ ಗ್ರಾಮದ ಬಳಿ ಸೇತುವೆಯಿಂದ ಬೈಕ್ ಸಮೇತ ಕೆಳಗೆ ಬಿದ್ದಂತೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದ ಪ್ರಕರಣ ಸಂಬoಧ ಇಬ್ಬರು ಆರೋಪಿಗಳನ್ನು ಕೆಆರ್‌ಎಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಹೊoಗಳ್ಳಿ ಗ್ರಾಮದ ಚಂದ್ರ ಹಾಗೂ ಶ್ರೀಧರ್ ಬಂಧಿತ ಆರೋಪಿಗಳು. ಮೃತ ವ್ಯಕ್ತಿ ಅಶೋಕ್ ಕೂಡ ಅದೇ ಗ್ರಾಮದವನಾಗಿದ್ದ. ಆರೋಪಿ ಚಂದ್ರನ ಪತ್ನಿ ಜತೆ ಮೃತ ಅಶೋಕ್ ಅಕ್ರಮ ಸಂಬoಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದೇ ಕಾರಣದಿಂದ ಕಲ್ಲಿನಿಂದ ಹೊಡೆದು ಬೈಕ್ ಸಮೇತ ಸೇತುವೆಯಿಂದ ಕೆಳಗೆ ಹಾಕಿ ಅಪಘಾತದಂತೆ ಬಿಂಬಿಸಲಾಗಿತ್ತು.

ಕೆಆರ್‌ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಶಂಕೆಯ ಮೇಲೆ ತನಿಖೆ ಕೈಗೊಂಡಿದ್ದರು. ಅದರಂತೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ :ಜಿಂಕೆ ಮಾಂಸ ಮಾರಾಟ: ಅರಣ್ಯಾಧಿಕಾರಿಗಳಿಂದ ಇಬ್ಬರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next