Advertisement

ಕೋವಿಡ್ ಸೋಂಕಿನಿಂದ ಪತಿ ಸಾವು : ಮನನೊಂದ ಪತ್ನಿ ನೇಣಿಗೆ ಶರಣು

07:01 PM May 22, 2021 | Team Udayavani |

ಮಂಡ್ಯ: ಪತಿ ಕೊರೊನಾಗೆ ಬಲಿಯಾದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಾಗಮಂಗಲ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಶನಿವಾರ ಹೃದಯ ವಿದ್ರಾವಕ ಘಟನೆ ನಡೆದಿದೆ.

Advertisement

ಗ್ರಾಮದ ಕಿರಣ್ ಕೊರೊನಾದಿಂದ ಮೃತಪಟ್ಟ ಪತಿಯಾಗಿದ್ದು, ಈತನ ಪತ್ನಿ ಪೂಜಾ ನೇಣಿಗೆ ಶರಣಾದ ಮಹಿಳೆ.
ಕೆಲವು ದಿನಗಳಿಂದ ಪತಿ ಕಿರಣ್ ಕೊರೊನಾ ಸೋಂಕಿನಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕಿರಣ್ ಮೃತಪಟ್ಟಿದ್ದರು.

ಅದರಂತೆ ಕೊರೊನಾ ನಿಯಮದಂತೆ ಕಿರಣ್ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಬೊಮ್ಮೇನಹಳ್ಳಿಯಲ್ಲಿ ಕುಟುಂಬಸ್ಥರು ನೆರವೇರಿಸಿದ್ದರು.

ಇದನ್ನೂ ಓದಿ :ವೈದ್ಯಕೀಯ ಶಿಕ್ಷಣ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿ: ಟಿ.ಎಸ್‌. ನಾಗಾಭರಣ

ಅಂತ್ಯಕ್ರಿಯೆ ನಡೆಸಿ ಮನೆಗೆ ಬಂದ ಪೂಜಾ, ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಕಳೆದ 11 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಇಬ್ಬರ ಸಾವಿನಿಂದ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next