Advertisement

ದಂಪತಿಗಳನ್ನು ತಡೆದು ಚಿನ್ನದ ಸರ ದೋಚಿದ ದುಷ್ಕರ್ಮಿಗಳು: ಒಂದು ವಾರದಲ್ಲಿ ನಡೆದ 5 ನೇ ಪ್ರಕರಣ

10:06 PM Mar 08, 2021 | Team Udayavani |

ಮಂಡ್ಯ: ಸ್ವಗ್ರಾಮದಿಂದ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ದುಷ್ಕರ್ಮಿಗಳ ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿ ದರೋಡೆ ಮಾಡಿರುವ ಘಟನೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಟಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಶಂಭುದೇವನಪುರ ಗ್ರಾಮದ ಲೋಕೇಶ್ ಎಂಬುವರ ಪತ್ನಿ ಲತಾ ಮಾಂಗಲ್ಯಸರ ಕಳೆದುಕೊಂಡ ಮಹಿಳೆ.

Advertisement

ಸ್ವಗ್ರಾಮದಿಂದ ಸೋಮವಾರ ನಮ್ಮ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬಿಜಿಪುರ ಹೋಬಳಿಯ ಮುಟ್ಟನಹಳ್ಳಿ ಸಮೀಪದ ನಿಜಲಿಂಗಪ್ಪ ಎಂಬುವರ ತೋಟದ ಬಳಿ ಎರಡು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ದಂಪತಿಯನ್ನು ಅಡ್ಡಗಟ್ಟಿ ಮಹಿಳೆ ಲತಾ ಅವರ ಕತ್ತಿನಲ್ಲಿದ್ದ 50 ಗ್ರಾಂ ಮೌಲ್ಯದ ಚಿನ್ನದ ಸರ ಹಾಗೂ ಮೊಬೈಲ್ ಕಸಿದುಕೊಂಡಿದ್ದಾರೆ. ಈ ವೇಳೆ ಪ್ರತಿರೋಧ ವ್ಯಕ್ತಪಡಿಸಿದ ಲೊಕೇಶ್ ಮತ್ತು ಲತಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ :ಯುವತಿಯ ರುಂಡಮುಂಡ ಕತ್ತರಿಸಿ ಕೊಲೆ ಪ್ರಕರಣ : ಐದು ತಿಂಗಳ ಬಳಿಕ ಆರೋಪಿಗಳ ಸೆರೆ

ಗಾಯಗೊಂಡಿದ್ದ ದಂಪತಿ ಬೆಳಕವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಎಚ್.ಲಕ್ಷ್ಮಿ ನಾರಾಯಣಪ್ರಸಾದ್, ಸಿಪಿಐ ಡಿ.ಪಿ.ಧನರಾಜ್, ಪಿಎಸ್‌ಐ ಹನುಮಂತಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ಹಾಡುಹಗಲೇ ನಡೆದಿರುವ ಘಟನೆಯಿಂದ ಮುಟ್ಟನಹಳ್ಳಿ ಅಕ್ಕ-ಪಕ್ಕದ ಜನರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಒಂದು ವಾರದಲ್ಲಿ ತಾಲೂಕಿನ ನಡೆದಿರುವ ಐದನೇ ಸರ ಕಳವು ಪ್ರಕರಣ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next