Advertisement

ಮಂಡ್ಯ: ಬಿಜೆಪಿ ಲೋಕಾ ಅಭ್ಯರ್ಥಿ ಯದುವೀರ್‌? 

06:00 AM Sep 08, 2018 | Team Udayavani |

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ಯುವರಾಜ ಯದುವೀರ್‌ ಅವರನ್ನು ಕಣಕ್ಕಿಳಿಸುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. 

Advertisement

ಆರು ತಿಂಗಳ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್‌.ಯಡಿಯೂರಪ್ಪ ಅವರು ಮೈಸೂರು ಅರಮನೆಗೆ ಭೇಟಿ ನೀಡಿ, ಯದುವೀರ್‌ ಜೊತೆ ರಹಸ್ಯ ಮಾತುಕತೆ ನಡೆಸಿ ಹೋಗಿದ್ದರು. ಆ ವೇಳೆ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಯದುವೀರ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ಗುಪ್ತವಾಗಿ ಮಾತುಕತೆ ನಡೆಸಲಾಗಿದೆ ಎನ್ನಲಾಗುತ್ತಿದ್ದು, ಅದಕ್ಕೆ ಈಗ ರೆಕ್ಕೆ-ಪುಕ್ಕ ಮೂಡಲಾರಂಭಿಸಿದೆ. ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಒಂದೊಂದು ಸ್ಥಾನವೂ ಬಹಳ ಮುಖ್ಯ.

ಆ ನಿಟ್ಟಿನಲ್ಲಿ ಯದುವೀರ್‌ ಆಯ್ಕೆ ಸೂಕ್ತ ಹಾಗೂ ಸಮಯೋಚಿತ ಎಂದು ರಾಜ್ಯ, ರಾಷ್ಟ್ರ ನಾಯಕರಿಗೆ ಸಂದೇಶ ರವಾನಿಸಲಾಗಿದೆ. ಬಿಜೆಪಿ ಕೂಡ ಈಗಾಗಲೇ ಇಲ್ಲಿ ಹಲವಾರು ಅಭ್ಯರ್ಥಿಗಳನ್ನು ಕರೆ ತಂದು ನಿಲ್ಲಿಸಿದ್ದರೂ ಜೆಡಿಎಸ್‌, ಕಾಂಗ್ರೆಸ್‌ ಎದುರು ಗೆಲುವಿನ ಗುರಿ ಮುಟ್ಟಲಾಗಲೇ ಇಲ್ಲ. ಚಿತ್ರನಟ ಉಪೇಂದ್ರ ಅವರನ್ನು ಕರೆ ತರುವ ಪ್ರಯತ್ನ ಈಡೇರಲೇ ಇಲ್ಲ. ಹಾಗಾಗಿ, ಯದುವೀರ್‌ ಅವರನ್ನು ಕರೆ ತಂದಲ್ಲಿ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ದುಡಿಯುವರೆಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next