Advertisement

Manager ಹತ್ಯೆ ಪ್ರಕರಣ: ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್‌ ಖುಲಾಸೆ

11:43 PM May 28, 2024 | Team Udayavani |

ಚಂಡೀಗಢ: ಡೇರಾ ಸಚ್ಚಾ ಸೌಧದ ಮ್ಯಾನೇಜರ್‌ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಡೇರಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಮತ್ತು ನಾಲ್ವರು ಸಹಚರರನ್ನು ಪಂಜಾಬ್‌, ಹರಿಯಾಣ ಹೈಕೋರ್ಟ್‌ ಖುಲಾಸೆಗೊಳಿಸಿದೆ. ಡೇರಾ ಸೌಧದ ಮಾಜಿ ಮ್ಯಾನೇಜರ್‌ ರಂಜೀತ್‌ ಸಿಂಗ್‌ರನ್ನು 2002 ರಲ್ಲಿ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. ಈ ಹತ್ಯೆಗೆ ಗುರ್ಮೀತ್‌ ಮತ್ತು ಅವರ ನಾಲ್ವರು ಸಹಚರರು ಪಿತೂರಿ ರೂಪಿಸಿದ್ದರೆಂದು ಆರೋಪಿಸಲಾಗಿತ್ತು.

Advertisement

ಪ್ರಕರಣ ಸಂಬಂಧ ಹರಿಯಾಣದ ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್‌ ಮತ್ತ ವರ ಸಹಚರರನ್ನು 2021ರಲ್ಲಿ ದೋಷಿಗಳೆಂದು ಪರಿಗಣಿಸಿತ್ತು. ಅದನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ಆರೋ ಪಿಗಳು ಮನವಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next