Advertisement

PMC ಬ್ಯಾಂಕ್ ಹಗರಣ; ಪ್ರತಿಭಟನೆ ಬಳಿಕ 90 ಲಕ್ಷ ಇಟ್ಟಿದ್ದ ಠೇವಣಿದಾರ ಹೃದಯಾಘಾತದಿಂದ ನಿಧನ

09:34 AM Oct 16, 2019 | Nagendra Trasi |

ಮುಂಬೈ:ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ (ಪಿಎಂಸಿ) ಬ್ಯಾಂಕ್ ಹಗರಣದ ಬಿಕ್ಕಟ್ಟಿನಿಂದ 90 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದ ಬ್ಯಾಂಕ್ ಖಾತೆದಾರರೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿ ಮನೆಗೆ ಮರಳಿದ ನಂತರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ಸೋಮವಾರ ನಡೆದಿದೆ.

Advertisement

ಮುಂಬೈ ಕೋರ್ಟ್ ಹೊರಗೆ ಪಿಎಂಸಿ ಬ್ಯಾಂಕ್ ಹಗರಣದ ಕುರಿತ ಪ್ರತಿಭಟನೆಯಲ್ಲಿ ಸಂಜಯ್ ಗುಲ್ಟಿ(51ವರ್ಷ) ಭಾಗವಹಿಸಿದ್ದರು. ಜೆಟ್ ಏರ್ ವೇಸ್ ಮಾಜಿ ಉದ್ಯೋಗಿಯಾಗಿರುವ ಸಂಜಯ್ ಅವರು ಪಿಎಂಸಿ ಬ್ಯಾಂಕ್ ನಲ್ಲಿ 90 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರು. ಒಂದೆಡೆ ಕೆಲಸ ಇಲ್ಲ, ಮತ್ತೊಂದೆಡೆ ಬ್ಯಾಂಕ್ ನಲ್ಲಿ ಇಟ್ಟ ಠೇವಣಿ ಹಣ ಪಡೆಯಲು ಸಾಧ್ಯವಾಗದೆ ಒತ್ತಡಕ್ಕೆ ಒಳಗಾಗಿದ್ದರು ಎಂದು ಮತ್ತೊಬ್ಬ ಪ್ರತಿಭಟನಾಕಾರರಾದ ಮನಾಲಿ ನಾರ್ಕರ್ ತಿಳಿಸಿದ್ದಾರೆ.

80ವರ್ಷದ ತಂದೆ ಜತೆ ಸಂಜಯ್ ಗುಲ್ಟಿ ಅವರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು, ಮನೆಗೆ ತೆರಳಿದ್ದರು. ಊಟ ಮಾಡಿ ಮಲಗಿದ್ದ ಸಂಜಯ್ ಗುಲ್ಟಿ ಅವರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವುದಾಗಿ ಓಶಿವಾರಾ ಪೊಲೀಸ್ ಠಾಣಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ನಿಂದ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಎಚ್ ಡಿಐಎಲ್ ಪಡೆದಿದ್ದ 5000 ಕೋಟಿಗೂ ಅಧಿಕ ಸಾಲವನ್ನು ಮರುಪಾವತಿಸದೇ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರು, ಠೇವಣಿದಾರರು ಇಕ್ಕಟ್ಟಿಗೆ ಸಿಲುಕುವಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next