Advertisement

ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕ ಶವವಾಗಿ ಪತ್ತೆ

02:01 PM Sep 13, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ಹರಿಯುವ ಭೀಮಾ ನದಿಯಲ್ಲಿ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

Advertisement

ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಸೇತುವೆ ಕೆಳಗೆ ಪತ್ತೆಯಾದ ಶವ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಯುವಕ ರಮೇಶ ಬಸರಗಿ (25) ಎಂದು ಗುರುತಿಸಲಾಗಿದೆ.

ಚಡಚಣ ತಾಲೂಕಿನ ಹತ್ತಳ್ಳಿ ಬಳಿ ಭೀಮಾ ನದಿ‌ ತುಂಬಿ ಹರಿಯುತ್ತಿದೆ.  ಮಹಾರಾಷ್ಟ್ರ ರಾಜ್ಯದ ಹಳ್ಳಿಯಿಂದ ಉಮರಾಣಿ – ಲವಗಿ ಬ್ಯಾರೇಜ್ ಬೈಕ್ ಮೂಲಕ ಗ್ರಾಮಕ್ಕೆ ಮರಳಲು ನದಿ ದಾಟುವಾಗ ನದಿ ಹರಿವಿನ ರಭಸಕ್ಕೆ ರಮೇಶ ಕೊಚ್ಚಿ ಹೋಗಿದ್ದ.

ಇದನ್ನೂ ಓದಿ: ಹುಣಸೂರು: ಬಸ್ -ಬೈಕ್ ಮುಖಾಮುಖಿಯಲ್ಲಿ ಸವಾರರಿಬ್ಬರು ಸಾವು

ನುರಿತ ಈಜುಗಾರರ ನೆರವಿನಿಂದ ಗ್ರಾಮದ ಜನರು ರಮೇಶಗಾಗಿ ಶೋಧ ನಡೆಸಿದ್ದರು. ಭಾನುವಾರ ಶವ ಪತ್ತೆಯಾಗಿದ್ದು, ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next