Advertisement

ಜಾರ್ಖಂಡ್‌ : ಆನೆಗಳ ದಾಳಿಗೆ ಗ್ರಾಮಸ್ಥ ಬಲಿ; ಅಪಾರ ಕೃಷಿ ನಾಶ

03:18 PM Dec 18, 2018 | Team Udayavani |

ಪಾಕುರ್‌, ಜಾರ್ಖಂಡ್‌ : ಪಾಕುರ್‌ ಜಿಲ್ಲೆಯ ಖಾಸ್ಕಾ ಗ್ರಾಮಕ್ಕೆ ನುಗ್ಗಿ ಬಂದ ಆನೆಗಳ ಹಿಂಡೊಂದು 30 ವರ್ಷ ಪ್ರಾಯದ ವ್ಯಕ್ತಿಯೊಬ್ಬನನ್ನು ತುಳಿದು ಸಾಯಿಸಿರುವ ದಾರುಣ ಘಟನೆ ವರದಿಯಾಗಿದೆ.

Advertisement

ಸುಮಾರು 30 ಆನೆಗಳಿದ್ದ ಈ ಹಿಂಡು ಮೊನ್ನೆ ಭಾನುವಾರ ರಾತ್ರಿ ಡುಮ್ಕಾ ಜಿಲ್ಲೆಯ ಪಾಕೂರಿಯ ಬ್ಲಾಕ್‌ ಗೆ ನುಗ್ಗಿ ವ್ಯಾಪಕ ಕೃಷಿ ನಾಶ ಗೈದಿತು.

ನಸುಕಿನ ವೇಳೆ ಆನೆಗಳ ಹಿಂಡಿನ ಸದ್ದಿಗೆ ಭಯಭೀತರಾಗಿ ಎದ್ದ ಗ್ರಾಮಸ್ಥರು ತಮ್ಮ ಮನೆಗಳಿಂದ ಹೊರಗೋಡಿದರು. ಆಗ ಇಮ್ಯಾನುವೆಲ್‌ ಹೆಂಬ್ರಾಮ್‌ ಎಂಬ ಗ್ರಾಮಸ್ಥ ಆನೆಗಳ ದಾಳಿಗೆ ಸಿಲುಕಿ ಮೃತಪಟ್ಟ ಎಂದು ಉಪ ವಿಭಾಗೀಯ ಅಧಿಕಾರಿ ಜೀತೆಂದ್ರ ಕುಮಾರ್‌ ದೇವ್‌ ತಿಳಿಸಿದರು. ಮೃತನ ಕುಟುಂಬಕ್ಕೆ ಅರಣ್ಯಾಧಿಕಾರಿಗಳು ನಾಲ್ಕು ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next