Advertisement

ನೀರಿನ ಬಾಟಲ್‌ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರು

07:03 PM Aug 08, 2022 | Team Udayavani |

ಲಕ್ನೋ: ಕುಡಿಯುವ ನೀರಿನ ಬಾಟಲ್‌ ಖರೀದಿ ವಿಚಾರಕ್ಕೆ ಉಂಟಾದ ಜಗಳ ಪ್ರಯಾಣಿಕನನ್ನು ರೈಲಿಂದ ಹೊರಗೆ ಎಸೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Advertisement

ಲಲಿತ್‌ಪ್ರದೇಶ ಜಿಲ್ಲೆಯ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರವಿ ಯಾದವ್‌(26) ಎಂಬುವರು ಸಹೋದರಿಯೊಂದಿಗೆ ರಾಪ್ತಿಸಾಗರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ರೈಲ್ವೆ ಕೆಟರಿಂಗ್‌ ಸಿಬ್ಬಂದಿಯ ನಡುವೆ ಬಾಟಲ್‌ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ.

ಇದನ್ನೂ ಓದಿ:ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

ಹೀಗಾಗಿ, ರವಿ ಅವರ ಸಹೋದರಿ ಲಲಿತ್‌ಪುರ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿದು ನಡೆದಿದ್ದಾರೆ. ಆದರೆ ರವಿಗೆ ಕೆಳಗಿಳಿಯಲು ಬಿಡದ ಸಿಬ್ಬಂದಿ, ರೈಲು ಚಲಿಸುತ್ತಿದ್ದ ವೇಳೆ, ಅವರನ್ನು ಅವರ ಮೇಲೆ ಹಲ್ಲೆ ನಡೆಸಿ, ರೈಲಿನಿಂದ ಹೊರಗೆಸೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next