Advertisement

ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ: ಎರಡು ದಿನಗಳಲ್ಲಿ ಎರಡನೇ ಪ್ರಕರಣ !

09:58 AM Jan 04, 2020 | keerthan |

ಉಳ್ಳಾಲ: ಯುವ ಉದ್ಯಮಿಯೋರ್ವರು ಆತ್ಮಹತ್ಯೆ ನಡೆಸಿರುವ ಘಟನೆ ನೇತ್ರಾವತಿ ಸೇತುವೆಯಲ್ಲಿ ಶುಕ್ರವಾರ ಮುಂಜಾನೆ ವೇಳೆ ನಡೆದಿದ್ದು, ಸುಮಾರು ಒಂದು ಗಂಟೆಯ ಕಾರ್ಯಾಚರಣೆ ಬಳಿಕ ಮೃತದೇಹ ಕೋಟೆಪುರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

Advertisement

ಕುತ್ತಾರು ನಿವಾಸಿ ಮಹಾಬಲ ಕೊಟ್ಟಾರಿ ಎಂಬವರ ಪುತ್ರ ನವೀಶ್ ಕೊಟ್ಟಾರಿ (28) ಆತ್ಮಹತ್ಯೆ ಮಾಡಿಕೊಂಡು ಮೃತರಾದವರು. ಪ್ರಸ್ತುತ ಉಳ್ಳಾಲಬೈಲಿನಲ್ಲಿ ವಾಸವಿದ್ದ ಇವರು ಶುಕ್ರವಾರ ಬೆಳಗ್ಗಿನ ಜಾವ ಮನೆಯಿಂದ ಹೊರಟವರು ನೇತ್ರಾವತಿ ನದಿ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ನದಿಗೆ ಜಿಗಿದು ಆತ್ಮಹತ್ಯೆ ನಡೆಸಿದ್ದಾರೆ.

ಕುತ್ತಾರು ಬಳಿ ಶಾಮಿಯಾನ ಅಂಗಡಿ, ನೀರಿನ ಟ್ಯಾಂಕರ್ ವ್ಯವಹಾರ ನಡೆಸುತ್ತಿದ್ದರು. ಗುರುವಾರ ರಾತ್ರಿಯಿಂದಲೇ ಮಂಕಾಗಿದ್ದರು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ನಡೆಸಿರುವ ಶಂಕೆ ಇದೆ. ನವೀಶ್ ಅವಿವಾಹಿತರಾಗಿದ್ದು, ತಾಯಿ, ತಂದೆ , ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಎರಡು ದಿನಗಳಲ್ಲಿ ಎರಡನೇ ಪ್ರಕರಣ !
ಎರಡು ದಿನಗಳ ಹಿಂದೆ ಬುಧವಾರ ಸುರತ್ಕಲ್ ನಿವಾಸಿ ನೌಷಾದ್ (24) ಇದೇ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ನಡೆಸಿದ್ದರು.  ಇವರ ಮೃತದೇಹ ಗುರುವಾರ ಪಾಂಡೇಶ್ವರ ಸಮೀಪ ಪತ್ತೆಯಾಗಿತ್ತು. ತನ್ನ ಸಾವಿಗೆ ತಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ನಡೆಸಿದ್ದರು. ಎರಡು ದಿನಗಳಲ್ಲಿ ಎರಡು ಪ್ರಕರಣವಾಗಿದೆ.

Advertisement

ಖ್ಯಾತ ಉದ್ಯಮಿ ಕೆಫೆ ಡೇ ಸ್ಥಾಪಕ ಸಿದ್ದಾರ್ಥ್ ಆತ್ಮಹತ್ಯೆ ಬಳಿಕ ಹಲವರು ಸೇತುವೆಯಿಂದ ಹಾರುವ ಮೂಲಕ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗಿಬಿಟ್ಟಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next