Advertisement

ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಖದೀಮ!

02:10 PM Sep 26, 2020 | keerthan |

ಶಿವಮೊಗ್ಗ: ಮಾಸ್ಕ್ ಹಾಕದ ಕಾರಣ ಠಾಣೆಗೆ ಕರೆದೊಯ್ದು ದಂಡ ಹಾಕಿದ ಪೊಲೀಸ್ ಪೇದೆಯ ಬೈಕ್ ಅನ್ನೇ ಖದೀಮನೋರ್ವ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ.

Advertisement

ಹೊಸನಗರ ಪೊಲೀಸ್ ಠಾಣೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಆರೋಪಿ ಚೇತನ್ ನನ್ನು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬಂಧಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದ ಕಾರಣದಿಂದ ಚೇತನ್ ಗೆ ಪೊಲೀಸರು ಠಾಣೆಗೆ ಕರೆದೊಯ್ದು ದಂಡ ವಿಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಆತ ಪೊಲೀಸ್ ಠಾಣೆಯಿಂದ ಹೊರಬಂದು ಪಕ್ಕದಲ್ಲಿ ನಿಲ್ಲಿಸಿದ್ದ ಪೇದೆಯ ಬೈಕನ್ನೇ ಕಳ್ಳತನ ಮಾಡಿದ್ದಾನೆ.

ಇದನ್ನೂ ಓದಿ: ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ

ಹೀಗೆ ಪೊಲೀಸ್ ಠಾಣೆ‌ ಎದುರು ನಿಲ್ಲಿಸಿದ್ದ ಪೊಲೀಸರ ಬೈಕನ್ನೇ ಕದ್ದು ಕುಂದಾಪುರಕ್ಕೆ ತೆರಳಿದ್ದ ಚೇತನ್ ನನ್ನು ಪೊಲೀಸರು ಒಂದೇ ದಿನದಲ್ಲಿ ಸೆರೆ ಹಿಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next