Advertisement

ಬಾಗಿಲು ತೆರೆದಿದೆ ಎಂದು ವೈನ್ ಶಾಪ್ ಗೆ ಕಾಲಿಟ್ಟ: ಅಬಕಾರಿ ಪೊಲೀಸರನ್ನು ಕಂಡು ಕಾಲ್ಕಿತ್ತ

02:37 PM May 03, 2020 | keerthan |

ಶಿವಮೊಗ್ಗ: ಮದ್ಯದಂಗಡಿ ತೆರೆದಿದೆ ಎಂದು ಸಂತೋಷದಿಂದ ಬಂದ ವ್ಯಕ್ತಿಯೊಬ್ಬ ವೈನ್‌ ಸ್ಟೋರ್‌ ಒಳಗೆ ಇದ್ದ ಅಬಕಾರಿ ಪೊಲೀಸರನ್ನು ಕಂಡು ಕಾಲ್ಕಿತ್ತ ಸ್ವಾರಸ್ಯಕರ ಘಟನೆ ಶನಿವಾರ ನಡೆದಿದೆ.

Advertisement

ಸೋಮವಾರದಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆ ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ವೈನ್‌ ಸ್ಟೋರ್‌ಗಳಲ್ಲಿ ಸ್ಟಾಕ್‌ ಚೆಕ್‌ ಮಾಡಲಾಗುತ್ತಿದೆ. ಅದೇ ರೀತಿ ಶನಿವಾರ ಕಾಶಿಪುರದಲ್ಲಿ ಅಬಕಾರಿ ಇಲಾಖೆ ಪೊಲೀಸರು ಸ್ಟಾಖ್‌ ಚೆಕ್‌ ಮಾಡುವುದರಲ್ಲಿ ನಿರತರಾಗಿದ್ದರು.

ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ವ್ಯಕ್ತಿ ಬಾರ್‌ ಓಪನ್‌ ಇರುವುದು ಕಂಡು ಸಂತಸದಿಂದ ಬಾರ್‌ನತ್ತ ಹೆಜ್ಜೆ ಹಾಕಿದ. ಆದರೆ ಹತ್ತಿರ ಹೋಗುತ್ತಿದ್ದಂತೆ ಪೊಲೀಸರ ಕಂಡು ಅಲ್ಲಿಂದ ನಿಧಾನವಾಗಿ ಓಡಿಹೋದ ಘಟನೆ ನಡೆಯಿತು.

ಸರಕಾರ ಸೋಮವಾರದಿಂದ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ ಮಾಡುವುಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next