Advertisement

ಪುತ್ತೂರು: ಮರ ಕಡಿಯುವ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

06:33 PM May 26, 2022 | Team Udayavani |

ಪುತ್ತೂರು: ಮರ ಕಡಿಯುವ ವೇಳೆ ವಿದ್ಯುತ್‌ ತಂತಿ ಸ್ಪರ್ಶಿಸಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ‍ಗುರುವಾರ ( ಮೇ 26 ರಂದು) ನರಿಮೊಗರು ಬಳಿ ಸಂಭವಿಸಿದೆ.

Advertisement

ಮಾಡನ್ನೂರು ನಿವಾಸಿ ಮಲ್ಲ ಅವರ ಪುತ್ರ ವಸಂತ(35) ಮೃತಪಟ್ಟ ಕಾರ್ಮಿಕ. ಮರ ಕಡಿಯುವ ವೃತ್ತಿಯನ್ನು ಮಾಡುತ್ತಿದ್ದ ಇವರು ನರಿಮೊಗರು ಐಟಿಐ ಸಮೀಪದಲ್ಲಿ ಕೆಲಸ ನಿರತರಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಮರ ಕಡಿದು ಉರುಳಿಸುವ ವೇಳೆ ಮರ ವಿದ್ಯುತ್‌ ತಂತಿಯ ಮೇಲೆ ಬಿದ್ದಿದೆ. ಈ ವೇಳೆ ವಸಂತ್‌ ಅವರಿಗೆ ವಿದ್ಯುತ್‌ ಸ್ಪರ್ಶಿಸಿದೆ. ಮೃತರು ಪತ್ನಿ, ಎರಡು ವರ್ಷ ಪ್ರಾಯದ ಪುತ್ರ ಹಾಗೂ 9 ತಿಂಗಳು ಪ್ರಾಯದ ಪುತ್ರಿಯನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next