Advertisement

ಅದ್ಧೂರಿಯಾಗಿ ಸೆಟ್ಟೇರಿದ ಸತ್ಯಪ್ರಕಾಶ್ ರ ‘ಮ್ಯಾನ್‌ ಆಫ್ ದಿ ಮ್ಯಾಚ್’

08:15 AM Mar 21, 2021 | Team Udayavani |

ಕನ್ನಡ ಚಿತ್ರರಂಗಕ್ಕೆ “ರಾಮಾ ರಾಮಾ ರೇ’ ಮತ್ತು “ಒಂಲ್ಲಾ ಎರಡಲ್ಲಾ’ದಂತಹ ಅಪರೂಪದ ಸಿನಿಮಾಗಳನ್ನು ನೀಡಿದ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ. ಸತ್ಯಪ್ರಕಾಶ್‌ ತಮ್ಮ ಮೂರನೇ ನಿರ್ದೇಶನದ ಸಿನಿಮಾ “ಮ್ಯಾನ್‌ ಆಫ್ ದಿ ಮ್ಯಾಚ್‌ ‘ನೊಂದಿಗೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿ ಇದ್ದಾರೆ.

Advertisement

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು, ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ, ಡಾಲಿ ಧನಂಜಯ, ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ದೇವರಾಜ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.

ಇದನ್ನೂ ಓದಿ: ಪಂಚಿಂಗ್ ಡೈಲಾಗ್, ಪವರ್‍ ಫುಲ್ ಫೈಟ್ಸ್ ನ  ‘ಯುವರತ್ನ’ ಟ್ರೈಲರ್ ರಿಲೀಸ್

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಡಿ. ಸತ್ಯಪ್ರಕಾಶ್‌, “ಪ್ರತಿದಿನ ಪ್ರತಿಯೊಬ್ಬನಿಗೂ ಒಂದು ಮ್ಯಾಚ್‌ ಇದ್ದಂತೆ. ಸಂಜೆಯಾಗುತ್ತಲೆ ಅವನು ಗೆದ್ದಿರುತ್ತಾನೆ ಅಥವಾ ಸೋತಿರುತ್ತಾನೆ. ಗೆಲುವು ಸೋಲುಗಳ ಹಗ್ಗಾಜಗ್ಗಾಟದಲ್ಲಿ ಗೆಲ್ಲುವುದು ವ್ಯಕ್ತಿಯೋ ಅಥವಾ ಮೌಲ್ಯಗಳ್ಳೋ ಇಲ್ಲವೇ ಸಂದರ್ಭ-ಸನ್ನಿವೇಶವೋ ಎನ್ನುವುದನ್ನು ಹುಡುಕುತ್ತಾ ಚಿತ್ರ ಸಾಗುತ್ತದೆ. ಇಡೀ ಕಥೆ ಒಂದೇ ದಿನದಲ್ಲಿ ಒಂದೇ ಜಾಗದಲ್ಲಿ ನಡೆಯುತ್ತದೆ’ ಎಂದು ವಿವರಣೆ ನೀಡಿದರು.

ಇನ್ನು “ಮ್ಯಾನ್‌ ಆಫ್ ದಿ ಮ್ಯಾಚ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಡಿ. ಸತ್ಯಪ್ರಕಾಶ್‌, “ಸತ್ಯ ಪಿಕ್ಚರ್’ ಎನ್ನುವ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. “ಸತ್ಯ ಪಿಕ್ಚರ್’ ಜೊತೆಗೆ “ಮಯೂರ ಮೋಶನ್‌ ಪಿಕ್ಚರ್’ನ ನಿರ್ಮಾಪಕರಾದ ಡಿ. ಮಂಜುನಾಥ ಕೂಡ “ಮ್ಯಾನ್‌ ಆಫ್ ದಿ ಮ್ಯಾಚ್‌’ ನಿರ್ಮಾಣದಲ್ಲಿ ಕೈ ಜೋಡಿಸುತ್ತಿದ್ದಾರೆ.

Advertisement

“ಮ್ಯಾನ್‌ ಆಫ್ ದಿ ಮ್ಯಾಚ್‌’ ಚಿತ್ರದಲ್ಲಿ “ರಾಮಾ ರಾಮಾ ರೇ..’ ಚಿತ್ರದ ಖ್ಯಾತಿಯ ನಟ ನಟರಾಜ್‌ ಮತ್ತು ಧರ್ಮಣ್ಣ ಕಡೂರ್‌ ಜೊತೆಗೆ ಸಾಕಷ್ಟು ಹೊಸ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಮದನ್‌ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಮತ್ತು ನೊಬಿನ್‌ ಪೌಲ್‌ ಸಂಗೀತ ಸಂಯೋಜನೆಯಿದೆ. ಇದೇ ಏಪ್ರಿಲ್‌ ತಿಂಗಳಿನಿಂದ “ಮ್ಯಾನ್‌ ಆಫ್ ದಿ ಮ್ಯಾಚ್‌’ ಶೂಟಿಂಗ್‌ ಶುರುಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next