Advertisement

ನಿಲ್ಲದ “ಥಳಿಸಿ ಹತ್ಯೆ’:ರಾಜಸ್ಥಾನದಲ್ಲಿ ಗೋ ಕಳ್ಳಸಾಗಾಣಿಕೆದಾರ ಬಲಿ

10:27 AM Jul 21, 2018 | Team Udayavani |

ಅಲ್ವಾರ್‌: ಸಂಸತ್‌ ಕಲಾಪದಲ್ಲಿ ಥಳಿಸಿ ಹತ್ಯೆಗಳ ವಿರುದ್ಧ ವಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗಾœಳಿ ನಡೆಸುತ್ತಿರುವ ವೇಳೆಯಲ್ಲೇ ರಾಜಸ್ಥಾನದಲ್ಲಿ  ಗೋ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಉದ್ರಿಕ್ತರು ಥಳಿಸಿ ಕೊಂದಿರುವ ಕಳವಳಕಾರಿ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 

Advertisement

ಅಲ್ವಾರ್‌ ರಾಮ್ಘಡ್‌ ಪ್ರದೇಶದಲ್ಲಿ  ಘಟನೆ ನಡೆದಿದ್ದು, ಹಲವು ಉದ್ರಿಕ್ತರು ಅಕ್ಬರ್‌ ಎಂಬಾತನನ್ನು ಬಡಿದು  ಕೊಂದಿದ್ದಾರೆ. ತೀವ್ರ ಥಳಿತಕ್ಕೊಳಗಾಗಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ಅಕ್ಬರ್‌ನನ್ನು ಸ್ಥಳಕ್ಕಾಗಮಿಸಿದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು ಬದುಕಿಸಲು ಸಾಧ್ಯವಾಗಲಿಲ್ಲ. 

ಘಟನೆ ಕುರಿತು ರಾಜಸ್ಥಾನದ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್‌ ತೀವ್ರ ಆಕ್ರೋಶ ಹೊರ ಹಾಕಿದೆ.  

Advertisement

Udayavani is now on Telegram. Click here to join our channel and stay updated with the latest news.

Next