Advertisement

ಐವರ ಕೊಚ್ಚಿ ಕೊಲೆ:ಪತ್ನಿ,3 ಮಕ್ಕಳು,ನಾದಿನಿ ಕೊಂದು ಠಾಣೆಗೆ ಶರಣಾದ!

09:02 AM Feb 26, 2017 | Team Udayavani |

ಕಂಪ್ಲಿ: ವ್ಯಕ್ತಿಯೊಬ್ಬ ತನ್ನ ಪತ್ನಿ, ಮೂವರು ಮಕ್ಕಳು ಮತ್ತು ನಾದಿನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಭತ್ಸ ಘಟನೆ ಶನಿವಾರ ರಾತ್ರಿ ಹೊಸಪೇಟೆ ತಾಲೂಕಿನ ಕಂಪ್ಲಿಯಲ್ಲಿ ನಡೆದಿದೆ. ಕೊಲೆ ಮಾಡಿದ ಭೂಪ ನೇರವಾಗಿ ಪೊಲೀಸ್‌ ಠಾಣೆಗೆ ತೆರಳಿ ವಿಷಯ ತಿಳಿಸಿ ಶರಣಾಗಿದ್ದಾನೆ.

Advertisement

ಪಟ್ಟಣದ ಮೂರನೇ ವಾರ್ಡ್‌ ಛತ್ರದಹಳ್ಳಿಯಲ್ಲಿ ಶನಿವಾರ ರಾತ್ರಿ 8.40ರ ಸುಮಾರಿಗೆ ಚಂಚನಗುಡ್ಡದ ತಿಪ್ಪಯ್ಯ ತನ್ನದೇ ಕುಟುಂಬದವರ ಹಲ್ಲೆ ನಡೆಸಿ ಹತ್ಯಾಕಾಂಡ ಎಸಗಿದ್ದಾನೆ. ಈತನ ಹಲ್ಲೆಯಿಂದ ಇಬ್ಬರು ಮಕ್ಕಳು ಸೇರಿ ಪತ್ನಿ, ನಾದಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಮಗಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಪತ್ನಿ ಫಕೀರಮ್ಮ (36), ಆಕೆಯ ಸಹೋದರಿ ಗಂಗಮ್ಮ (30), ಮಕ್ಕಳಾದ ಬಸಮ್ಮ (10)
ರಾಜು (6) ಮೃತಪಟ್ಟ ದುರ್ದೈವಿಗಳು. ಇನ್ನೊಬ್ಬ ಮಗಳು ಪವಿತ್ರಾ (6) ತೀವ್ರವಾಗಿ ಗಾಯ ಗೊಂಡಿದ್ದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಆಕೆಯೂ ರಾತ್ರಿ 10.30 ರ ಸುಮಾರಿಗೆ ಮೃತಪಟ್ಟಿದ್ದಾಳೆ. ಅದಷ್ಟವಶಾತ್‌ ಮತ್ತೂಬ್ಬ ಪುತ್ರಿ ರಾಜೇಶ್ವರಿ ಊರಿಗೆ ಹೋಗಿದ್ದರಿಂದ ಬಚಾವ್‌ ಆಗಿದ್ದಾಳೆ. ಗುಡಿಸಲಿನಲ್ಲಿದ್ದಾಗ ಪತಿ ಚಂಚನಗುಡ್ಡದ ತಿಪ್ಪಯ್ಯ, ಪತ್ನಿ, ಸೊಸೆ ಮತ್ತು ಮೂವರ ಮಕ್ಕಳ ಮೇಲೆ ಒಮ್ಮೆಲೇ ಮಚ್ಚಿ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ನೇರವಾಗಿ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ. 

ಇದು ಈತನ ಅಕ್ಕಪಕ್ಕದ ಮನೆಯವರಿಗೂ ಸಹ ತಿಳಿದಿಲ್ಲ. ಪೊಲೀಸರು ಈತನ ಮನೆಗೆ ಬಂದ ನಂತರವೇ ವಿಷಯ ಬೆಳಕಿಗೆ ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಕೌಟುಂಬಿಕ ಕಲಹದಿಂದ ಆರೋಪಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಆರ್‌.ಚೇತನ್‌, ಡಿವೈಎಸ್ಪಿ ಹೊನವಾರRರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆಗೆ ಕೌಟುಂಬಿಕ ಕಲಹವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಚಂಚನಗುಡ್ಡದ ತಿಪ್ಪಯ್ಯ ಮೂಲತಃ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದವರಾಗಿದ್ದು, ಪತ್ನಿಯ ತವರು ಮನೆಯಲ್ಲೇ ಇದ್ದು, ಮಾವಿನ ತೋಟಗಳಲ್ಲಿ ಹಣ್ಣು ಕೀಳುವ ಕೆಲಸ ಮಾಡುತ್ತಿದ್ದ. ಈ ಘಟನೆಯಿಂದ ಇಡೀ ಪಟ್ಟಣವೇ ತಲ್ಲಣಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next