Advertisement

ಬಂಡಿಪೋರಾ : ವ್ಯಕ್ತಿಯ ಕತ್ತು ಸೀಳಿ ಕೊಂದ ಲಷ್ಕರ್‌ ಉಗ್ರರು

11:52 AM May 25, 2018 | udayavani editorial |

ಶ್ರೀನಗರ : ಲಷ್ಕರ್‌ ಎ ತಯ್ಯಬ ಉಗ್ರರು ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್‌ ಎಂಬ ಪ್ರದೇಶದಲ್ಲಿ ಮೊಹಮ್ಮದ್‌ ಯಾಕೂಬ್‌ ವಗಾಯ್‌ ಎಂಬ ವ್ಯಕ್ತಿಯನ್ನು ಇಂದು ಶುಕ್ರವಾರ ನಸುಕಿನ ವೇಳೆಯಲ್ಲಿ  ಕತ್ತು ಸೀಳಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಮೊಹಮ್ಮದ್‌ ಯಾಕೂಬ್‌ ವಗಾಯ್‌ ಅವರನ್ನು ಅವರನ್ನು  ಗುಂದಾ ಪ್ರಂಗ್‌ ಗ್ರಾಮದಲ್ಲಿನ ಅವರ ಮನೆಯ ಸಮೀಪವೇ ದಾರುಣವಾಗಿ ಉಗ್ರರು ಕೊಂದರು. ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆಯ  ಸ್ಥಳೀಯ ಉಗ್ರ ಸಲೀಂ ಪಾರೇ ಎಂಬಾತನ ಗುಂಪಿನವರು ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next