Advertisement

ತೆಂಡೂಲ್ಕರ್‌ ಪುತ್ರಿ ಸಾರಾಗೆ ಕಿಡ್ನಾéಪ್‌ ಬೆದರಿಕೆ: ಪ.ಬಂಗಾಲ ಯುವಕನ

08:05 AM Jan 08, 2018 | Karthik A |

ಮುಂಬಯಿ: ‘ಕ್ರಿಕೆಟ್‌ ದೇವರು’ ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್‌ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಹಾಗೂ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ ಯುವಕನನ್ನು ಮುಂಬಯಿ ಪೊಲೀಸರು ರವಿವಾರ ಬಂಧಿಸಿದ್ದಾರೆ. ಪಶ್ಚಿಮ ಬಂಗಾಲದ ದೇವ್‌ಕುಮಾರ್‌ ಮಿಟ್ಟಿ ಎಂಬಾತನೇ ಬಂಧಿತ.

Advertisement

ಬಾಂದ್ರಾದಲ್ಲಿನ ತೆಂಡೂಲ್ಕರ್‌ನಿವಾಸದ ಲ್ಯಾಂಡ್‌ಲೈನ್‌ಗೆ  ಕರೆ ಮಾಡುತ್ತಿದ್ದ ಆರೋಪಿಯು, ಸಾರಾ ನನ್ನನ್ನು ಮದುವೆಯಾಗದಿದ್ದರೆ ಅವಳನ್ನು ಕಿಡ್ನ್ಯಾಪ್‌ ಮಾಡುತ್ತೇನೆ ಎಂದೂ ಬೆದರಿಕೆ ಹಾಕಿದ್ದ. ಟಿವಿಯಲ್ಲಿ ಸಾರಾಳನ್ನು ನೋಡಿದ್ದ ಮಿಟ್ಟಿ, ಇಂಟ ರ್ನೆಟ್‌ನಲ್ಲಿ ಫೋನ್‌ ನಂಬರ್‌ ಹುಡುಕಿ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 12ನೇ ತರಗತಿ ಯಲ್ಲೇ ಶಾಲೆ ಬಿಟ್ಟಿರುವ ಮಿಟ್ಟಿ, “ನನಗೆ ಸಾರಾ ಇಷ್ಟ. ಅವಳಿಗೆ ಪ್ರೇಮ ನಿವೇದನೆ ಮಾಡಿದರೆ ತಪ್ಪೇನು’ ಎಂದು ಪ್ರಶ್ನಿಸಿದ್ದಾನೆ.  ತೆಂಡೂಲ್ಕರ್‌ ಬಗ್ಗೆ ಏನು ಗೊತ್ತು ಎಂದಾಗ, ಆತ ನಗುತ್ತಾ “ಅವರು ನನ್ನ ಮಾವ ಅಲ್ವೇ’ ಎಂದು ಉತ್ತರಿಸಿದ್ದಾನಂತೆ.

Advertisement

Udayavani is now on Telegram. Click here to join our channel and stay updated with the latest news.

Next