Advertisement

Bengaluru ವಿಮಾನದ ನಕಲಿ ಟಿಕೆಟ್‌ ಬಳಸಿ ಸಿಕ್ಕಿಬಿದ್ದ!

12:49 AM Mar 14, 2024 | Team Udayavani |

ಬೆಂಗಳೂರು: ನಕಲಿ ಟಿಕೆಟ್‌ ಬಳಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

Advertisement

ಝಾರ್ಖಂಡ್‌ನ‌ ಪ್ರಖರ್‌ ಶ್ರೀವಾಸ್ತವ (24) ಬಂಧಿತ ಆರೋಪಿ. ಈತನ ಸ್ನೇಹಿತೆ ದಿಲ್ಲಿಯಿಂದ ಬೆಂಗಳೂರಿಗೆ ಬಂದಿದ್ದಳು.

ಆಕೆಯನ್ನು ವಿಮಾನದ ಮೂಲಕ ದಿಲ್ಲಿಗೆ ವಾಪಸ್‌ ಕಳುಹಿಸಲು ಆರೋಪಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಭದ್ರತಾ ಸಿಬಂದಿಗೆ ನಕಲಿ ಟಿಕೆಟ್‌ ತೋರಿಸಿ, ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ್ದ. ಸ್ನೇಹಿತೆಯನ್ನು ಬೀಳ್ಕೊಟ್ಟು ವಾಪಸ್‌ ಬರುವಾಗ ಅನುಮಾನಗೊಂಡ ಭದ್ರತಾ ಸಿಬಂದಿ ಪರಿಶೀಲಿಸಿದಾಗ ವಂಚನೆ ಬಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next