Advertisement

ಕುಂದಾಪುರದ ವ್ಯಕ್ತಿ ಮುಂಬಯಿಯಲ್ಲಿ ಸಾವು

12:29 AM May 20, 2024 | Team Udayavani |

ಕುಂದಾಪುರ: ವೀಡಿಯೋಗ್ರಾಫರ್‌, ಡೆಕೋರೇಟರ್‌, ಪೇಂಟರ್‌ ಆಗಿ ಕೆಲಸ ಮಾಡುತ್ತಿದ್ದ ಕುಂದಾಪುರ ಮೂಲದ ಅಭಿನಂದನ್‌ (49) ಮುಂಬಯಿಗೆ ತೆರಳಿದ್ದ ವೇಳೆ ಸ್ನೇಹಿತರ ಮನೆಯಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ಮೇ 18ರಂದು ಸಂಭವಿಸಿದೆ.

Advertisement

ಕುಂದಾಪುರದ ಪ್ರಸಿದ್ಧ ಬಸಂತ್‌ ಸ್ಟುಡಿಯೋದ ಮಾಲಕ ರಾಮಚಂದ್ರ ಅವರ ಪುತ್ರರಾಗಿದ್ದ ಅಭಿನಂದನ್‌ ಕೆಲವು ದಿನಗಳ ಹಿಂದೆ ಕಾರ್ಯ ನಿಮಿತ್ತ ಮುಂಬಯಿಗೆ ತೆರಳಿದ್ದರು. ಅವರು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಮೃತರು ಅವಿವಾಹಿತರಾಗಿದ್ದು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಅವರ ತಂದೆ ರಾಮಚಂದ್ರ ಅವರು ಮೂಲತಃ ಮಂಗಳೂರಿನ ಗುರುಪುರದವರು.

 

Advertisement

Udayavani is now on Telegram. Click here to join our channel and stay updated with the latest news.

Next