Advertisement

Kundapura ರಾಟೆಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

12:45 AM May 18, 2024 | Team Udayavani |

ಕುಂದಾಪುರ: ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿ, ಪ್ರಸ್ತುತ ವರ್ಕ್‌ ಫ್ರಂ ಹೋಮ್‌ ಆಗಿ ಕೆಲಸ ಮಾಡಿಕೊಂಡಿದ್ದ ಕಾವ್ರಾಡಿ ಸದಾಶಿವ (33) ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 17ರಂದು ಸಂಭವಿಸಿದೆ.

Advertisement

ಮೇ 16ರ ರಾತ್ರಿ 9.30ಕ್ಕೆ ಎಲ್ಲರೂ ಊಟ ಮಾಡಿ ಮಲಗಿದ್ದು, ಬೆಳಗ್ಗೆ ಸದಾಶಿವ ಅವರ ಪತ್ನಿ ಸುಪ್ರೀತಾ ಅವರು ಮನೆಯ ಬಾಗಿಲು ತೆಗೆದು ನೋಡಿದಾಗ ಎದುರಿನ ಬಾವಿಯ ದಂಡೆಯಲ್ಲಿ ಟಾರ್ಚ್‌ಲೈಟ್‌ ಪತ್ತೆಯಾಗಿದೆ.

ಹತ್ತಿರ ಹೋಗಿ ನೋಡಿದಾಗ ಪತಿ ಸದಾಶಿವ ಅವರ ಮೃತದೇಹ ಬಾವಿಯ ರಾಟೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಾವುದೋ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ.

ಸದಾಶಿವ ಅವರ ಅಣ್ಣ ರಾಘವೇಂದ್ರ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next