Advertisement

ಸಂಗಾಪೂರ ಕೆರೆಯಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು: ಕೋವಿಡ್ ಪರೀಕ್ಷೆಗೆ  ಸಿದ್ದತೆ

11:22 AM Jul 18, 2020 | keerthan |

ಗಂಗಾವತಿ: ಇಲ್ಲಿನ ಸಂಗಾಪೂರ ಕೆರೆಯಲ್ಲಿ ಸುಮಾರು 43 ವರ್ಷದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೋವಿಡ್ ಭೀತಿಯಲ್ಲಿ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.

Advertisement

ಸಂಗಾಪೂರ ಕೆರೆಯ ಹೂಳು ಎತ್ತುವ ಕಾರ್ಯ ಭರದಿಂದ ನಡೆಯುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ಇಲ್ಲಿ ಈ ಅಪರಿಚಿತ ವ್ಯಕ್ತಿಯನ್ನು ಯಾರೋ ಬಿಟ್ಟು ಹೋಗಿದ್ದರು. ಆತ ನಡೆದಾಡಲು ಅಶಕ್ತನಾಗಿದ್ದ, ಮೈಮೇಲೆ ಬಟ್ಟೆಗಳಿರಲಿಲ್ಲ, ಕೆರೆ ಹೂಳು ಎತ್ತುವ ರೈತರು ವಿಷಯವನ್ನು ಸಂಗಾಪೂರ ಗ್ರಾ.ಪಂ ಪಿಡಿಒ ಅವರ ಗಮನಕ್ಕೆ ತಂದ ತಕ್ಷಣ ಅಪರಿಚಿತ ವ್ಯಕ್ತಿಗೆ ಬಟ್ಟೆ ತೊಡಿಸಲಾಗಿತ್ತು.

ಶನಿವಾರ ಬೆಳಗಿನ ಜಾವ ಆ ಅಪರಿಚಿತ ವ್ಯಕ್ತಿ ಕೆರೆಯಲ್ಲಿ ಮೃತನಾಗಿ ಪತ್ತೆಯಾಗಿದ್ದಾನೆ.

ಕೋವಿಡ್ ಪರೀಕ್ಷೆ: ಸಂಗಾಪೂರ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದು ಮೃತ ವ್ಯಕ್ತಿಯ ಶವವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಮೃತ ವ್ಯಕ್ತಿಯ ಸ್ವಾಬ್ ಪಡೆದು ಬಳಿಕ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ ಉದಯವಾಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next