Advertisement

ತೆಂಗಿನಕಾಯಿ ಕೀಳಲುಹೋದ ಯುವಕ ನಿಯಂತ್ರಣ ತಪ್ಪಿ ಮರದಿಂದ ಬಿದ್ದು ಸಾವು!

01:46 PM Mar 16, 2021 | Team Udayavani |

ಚಿಕ್ಕಮಗಳೂರು: ಮನೆಯ ಆವರಣದಲ್ಲಿದ್ದ ತೆಂಗಿನ ಮರದಲ್ಲಿ ತೆಂಗಿನ ಕಾಯಿ ಕೀಳಲು ಹೋದ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಕಳಸ ಹೋಬಳಿ ವ್ತಾಪ್ತಿಯ ಹೇರಡಿಕೆ ಗ್ರಾಮದಲ್ಲಿ ಮಂಗಳವಾರ ವರದಿಯಾಗಿದೆ

Advertisement

ಹೇರಡಿಕೆ ನಿವಾಸಿ ಮಹೇಶ್ (24) ಮೃತಪಟ್ಟ ಯುವಕ.

ಇದನ್ನೂ ಓದಿ:ಉಡುಪಿ: ಸಕ್ರೀಯವಾಗಿದೆ ಮೂರ್ಛೆ ತಪ್ಪಿಸಿ ಕಳ್ಳತನ ಮಾಡುವ ಗ್ಯಾಂಗ್!

ಮಂಗಳವಾರ ಬೆಳಗ್ಗೆ ಮನೆಯ ಮುಂದಿದ್ದ ತೆಂಗಿನ ಮರದಲ್ಲಿ ಕಾಯಿ ಕೀಳಲು ಮರ ಏರಿದ್ದ ವೇಳೆ ಕಾಯಿ ಕೀಳುತ್ತಿದ್ದಾಗ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಕುಟುಂಬಸ್ಥರು ಯುವಕನನ್ನು ಕಳಸ ಆಸ್ಪತ್ರೆಗೆ ಕರೆ ತಂದಿದ್ದು, ಮಾರ್ಗ ಮಧ್ಯೆ ಯುವಕ‌ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

ಇದನ್ನೂ ಓದಿ: ಅಂಜನಾದ್ರಿ ಬೆಟ್ಟಕ್ಕೆ ಮಾಸ್ಟರ್ ಪ್ಲಾನ್: 50 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಅಭಿವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next