Advertisement

ಔರಂಗಾಬಾದ್‌: ಪತ್ನಿ, ಇಬ್ಬರು ಪುತ್ರಿಯರ ಕೊಂದು ವ್ಯಕ್ತಿ ಆತ್ಮಹತ್ಯೆ

05:02 PM Aug 31, 2018 | Team Udayavani |

ಮುಂಬಯಿ : 32 ವರ್ಷ ಪ್ರಾಯದ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಔರಂಗಾಬಾದ್‌ ಜಿಲ್ಲೆಯ ಫ‌ುಲಾಂಬ್ರಿ ಪಟ್ಟಣದಲ್ಲಿ ಈ ಘಟನೆ ನಿನ್ನೆ  ತಡ ರಾತ್ರಿ ನಡೆದಿದೆ. ಕೃಷ್ಣ ದೇವರಾ ಎಂಬ ವ್ಯಕ್ತಿ ತನ್ನ ಪತ್ನಿ ಸುಕನ್ಯಾ ಮತ್ತು ಇಬ್ಬರು ಪುತ್ರಿಯರಾದ ಸುವರ್ಣಾ (6) ಮತ್ತು ಹಿಂದವೀ (4) ಇವರನ್ನು ಕತ್ತು ಹಿಸುಕಿ ಕೊಂದು ಬಳಿಕ ತಾನು ನೇಣಿಗೆ ಶರಣಾಗಿದ್ದಾನೆ ಎಂದು ಔರಂಗಾಬಾದ್‌ ಗ್ರಾಮಾಂತರ ಎಸ್ಪಿ ಆರ್ತಿ ಸಿಂಗ್‌ ಹೇಳಿದ್ದಾರೆ. 

ಕೃಷ್ಣ ದೇವರಾ ನಡೆಸಿರುವ ಪತ್ನಿ, ಪುತ್ರಿಯರ ಕೊಲೆ ಮತ್ತು ಸ್ವಯಂ ಆತ್ಮಹತ್ಯೆಯ ಹಿಂದಿನ ಕಾರಣ ಏನೆಂಬುದು ಗೊತ್ತಾಗಿಲ್ಲ; ವಾಡೋದ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next