Advertisement

Aranthodu ಹೊಳೆಯಲ್ಲಿ ಮುಳುಗಿ ವ್ಯಕ್ತಿ ಸಾವು

11:15 PM Dec 01, 2023 | Team Udayavani |

ಅರಂತೋಡು: ಆಲೆಟ್ಟಿ ಗ್ರಾಮದ ಅರಂಬೂರು ಸೇತುವೆ ಬಳಿ ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.

Advertisement

ಮೃತಪಟ್ಟ ವ್ಯಕ್ತಿ ಮಡಿಕೇರಿ ಮದೆನಾಡು ಮೂಲದ ವೆಂಕಟ್ರಮಣ ಮೂಲ್ಯ (65) ಎಂದು ಗುರುತಿಸಲಾಗಿದೆ.

ಅರಂಬೂರು ಎಂಬಲ್ಲಿ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಅವರು ಭಜನ ಮಂದಿರದ ಬಳಿಯ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದರು. ಅದೇ ಸಮಯದಲ್ಲಿ ಭಜನ ಮಂದಿರದಿಂದ ಅಯ್ಯಪ್ಪ ವೃತಧಾರಿಗಳು ಸ್ನಾನಕ್ಕೆಂದು ಬರುವ ಸಂದರ್ಭ ‌ವ್ಯಕ್ತಿ ಮುಳುಗಿರುವುದನ್ನು ಗಮನಿಸಿದ್ದರು. ಸ್ಥಳೀಯ ಪಂಚಾಯತ್‌ ಸದಸ್ಯ ಸುಧೇಶ್‌ ಅರಂಬೂರು ಅವರು ಸುಳ್ಯ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೋಟ್‌ ಬಳಸಿ ಸುಮಾರು ಎರಡೂವರೆ ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಬಳಿಕ ಪೈಚಾರಿನ ಮುಳುಗು ತಜ್ಞರಾದ ಆರ್‌.ಬಿ. ಬಶೀರ್‌, ಅಬ್ಟಾಸ್‌ ಶಾಂತಿನಗರ, ಲತೀಫ್ ಬೊಳುಬೈಲು, ಶಿಯಾಬ್, ಲತೀಫ್ ಟಿ.ಎ. ಅವರ ತಂಡ ಆಗಮಿಸಿ ನದಿಯಲ್ಲಿ ಮುಳುಗಿ ಶವದ ಪತ್ತೆ ಕಾರ್ಯ ಮಾಡಿದರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next