Advertisement

ನಿಶ್ಚಿತಾರ್ಥದ ಮುನ್ನಾ ದಿನ ಸುಟ್ಟು ಕರಕಲಾದ ಯುವಕ

01:58 PM Sep 02, 2017 | Team Udayavani |

ತುರುವೇಕೆರೆ :  ನಿಶ್ಚಿತಾರ್ಥದ ಮುನ್ನಾ ದಿನ 30 ವರ್ಷ ಪ್ರಾಯದ ಯುವಕನೊಬ್ಬ ನಿಗೂಢವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಹಾಗಲನ ಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.

Advertisement

ಹಂಸ ಕುಮಾರ್‌ ಎಂಬ ಯುವಕ ನಿಗೆ ಬಾಗಲಕೋಟೆಯ ಯುವತಿಯೊಂದಿಗೆ ಇಂದು ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ ಶುಕ್ರವಾರ ಆಮಂತ್ರಣ ನೀಡಲೆಂದು ತೆರಳಿದ್ದ ಹಂಸಕುಮಾರ್‌ ಹಾಗಲನ ಹಳ್ಳಿಯ ಹೊರವಲಯಲ್ಲಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಕಾರೂ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಪೂರ್ವ ದ್ವೇಷದ ಹಿನ್ನಲೆಯಲ್ಲಿ ಕೊಲೆಗೈಯಲಾಗಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ದಂಡಿನ ಶಿವರ ಪೊಲೀಸರು ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next