Advertisement

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

05:54 PM May 05, 2024 | Team Udayavani |

ಧಾರವಾಡ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಂತ್ರಿಯಾಗಿ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿ ಮತ್ತೆ ಅವರನ್ನು ಜಿಲ್ಲೆಯ ಜನ ಆಯ್ಕೆ ಮಾಡಲಿದ್ದು,ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಜಿಲ್ಲಾ ಜೆಡಿಎಸ್ ಮುಖಂಡ ಗುರುರಾಜ ಹುಣಸೀಮರದ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ. ಈ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನೇ ಗೆಲ್ಲಿಸಿ ದೇಶ ಮುನ್ನಡೆಸಲು ಅವಕಾಶ ನೀಡಬೇಕಾದ ಅನಿವಾರ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಭಾರತದ ವರ್ಚಸ್ಸು ವೃದ್ದಿಯಾಗಲು ಮೋದಿ ಅವರೇ ಕಾರಣ ಎಂದರು.

ಧಾರವಾಡ ಜಿಲ್ಲೆಗೆ ಕಳಸಾ ಬಂಡೂರಿ, ರಿಂಗ್ ರಸ್ತೆ ಮತ್ತು ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿ ಹೊಂದಿ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಠಿಸಿಕೊಡಬೇಕಾಗಿದೆ. ಹೀಗಾಗಿ ಜೋಶಿ ಅವರನ್ನೇ ಗೆಲ್ಲಸಬೇಕಿದೆ. ಅವರು ಗೆದ್ದರೆ ಕೇಂದ್ರ ಸರ್ಕಾರದಿಂದ ಉತ್ತಮ ಯೋಜನೆಗಳನ್ನು ಧಾರವಾಡಕ್ಕೆ ತರುವುದು ಶತಃಸಿದ್ದ ಎಂದು ಹುಣಸಿಮರದ ಹೇಳಿದರು.

ಕಾಂಗ್ರೆಸ್‌ನ ವಿನೋದ ಅಸೂಟಿ ಅವರು ನನ್ನ ಗೆಳೆಯ. ಆದರೆ ಅವರಿಗೆ ರಾಜಕೀಯ ಅನುಭವ ಸಾಲುವುದಿಲ್ಲ. ಜೊತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ. ಈಗ ಅವರನ್ನು ಆಯ್ಕೆ ಮಾಡಿದರೆ ಧಾರವಾಡಕ್ಕೆ ಹಾನಿಯಾಗಲಿದೆ ಎಂದು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next