Advertisement

ಮೊಸಳೆ ಬಾಯಿಗೆ ಸಿಕ್ಕ ಕುರಿಗಾಯಿ

05:51 PM Mar 14, 2021 | Team Udayavani |

ಶಹಾಪುರ: ಕುರಿಗಳಿಗೆ ನೀರು ಕುಡಿಸಲು ಕೃಷ್ಣಾ ನದಿ ತೀರಕ್ಕೆ ಇಳಿದ ಕುರಿಗಾಯಿಯನ್ನು ಮೊಸಳೆ ಹೊತ್ತೂಯ್ದ ಘಟನೆ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿ ಶನಿವಾರ ನಡೆದಿದೆ.

Advertisement

ಶಾರದಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಣ ಭೀಮಣ್ಣ (34) ಮೊಸಳೆಗೆ ಆಹಾರವಾದ ದುರ್ದೈವಿ. ಈತ ಕಳೆದ ಒಂದು ತಿಂಗಳ ಹಿಂದೆಯಷ್ಟೆ ಯಕ್ಷಿಂತಿ ಗ್ರಾಮ ಸಮೀಪ ಕೃಷ್ಣಾ ನದಿ ತೀರದ ಜಮೀನೊಂದರಲ್ಲಿ ಕುರಿ ಹಟ್ಟಿ ಹಾಕಿಕೊಂಡಿದ್ದ ಎನ್ನಲಾಗಿದೆ. ಅರಣ್ಯ ಇಲಾಖೆ ಭೀಮರಾಯನ ಗುಡಿ ವಲಯ ಅ ಧಿಕಾರಿ ಐ.ಬಿ. ಹೂಗಾರ ಸೇರಿದಂತೆ ಇತರರು ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಕುರಿಗಾಯಿ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಸಂಜೆಯಾದರೂ ಪತ್ತೆಯಾಗಿಲ್ಲ. ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸ್ಥಳದಲ್ಲಿದ್ದ ಅ ಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿದು ನದಿ ತೀರದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next