Advertisement

ಸಂಪಾಜೆ : ಕೋವಿಡ್ ಸೋಂಕು ತಗುಲಿ ಯುವಕ ಸಾವು

04:16 PM Apr 28, 2021 | Team Udayavani |

ಸಂಪಾಜೆ : ಕೋವಿಡ್ ಎರಡನೇ ಅಲೆ ದೇಶವನ್ನೇ ಬೆಚ್ಚಿ ಬೀಳಿಸುತ್ತಿದೆ. ರಾಜ್ಯದಲ್ಲಿ ದಿನಕ್ಕೆ ಸಾವಿನ ಸಂಖ್ಯೆ ನೂರರ ಗಡಿ ದಾಟಿದೆ. ಇದೇ ಹಿನ್ನೆಲೆಯಲ್ಲಿ ಕೊಡಗಿನ ಸಂಪಾಜೆ ಗ್ರಾಮದ ಕುಂದಲ್ಪಾಡಿ ಬಾಲಕೃಷ್ಣ ಎಂಬುವವರ ಪುತ್ರ ನಿತೀಶ್ ಇಂದು (ಏ.28) ರಂದು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

Advertisement

30 ವರ್ಷ ವಯಸ್ಸಿನ ನಿತೀಶ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು ಇತ್ತೀಚೆಗೆ ಊರಿಗೆ ಮರಳಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಅವರು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ನಲ್ಲಿ ದಾಖಲಿಸಲಾಗಿತ್ತು.

ಇದೀಗ ಮಗನನ್ನು ಕಳೆದುಕೊಂಡ ನಿತೀಶ್ ಕುಟುಂಬ ಕಣ್ಣೀರಿನಿಂದ ಕೈ ತೊಳೆಯುತ್ತಿದೆ. ಇತ್ತ ರಾಜ್ಯದಲ್ಲಿ ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಏಪ್ರಿಲ್ 27 ರ ರಾತ್ರಿಯಿಂದ ಮೇ 14 ವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next