Advertisement

ಕುಡಿದ ಅಮಲಿನಲ್ಲಿ ರಸ್ತೆ ಬದಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು

08:41 AM Nov 10, 2021 | Team Udayavani |

ಮುದ್ದೇಬಿಹಾಳ: ಕುಡಿದ ಅಮಲಿನಲ್ಲಿ ರಸ್ತೆ ಬದಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ಪಟ್ಟಣದ ಪಿಲೇಕೆಮ್ಮ ನಗರದಲ್ಲಿ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

Advertisement

ಮೃತನನ್ನು ಕೋಳೂರು ತಾಂಡಾ ನಿವಾಸಿ, ಪಟ್ಟಣದ ಅಂಬೇಡ್ಕರ್ ಸರ್ಕಲ್‌ ಎದುರಿಗೆ ಇರುವ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಅವಿವಾಹಿತ ಬಾಲಚಂದ್ರ ಹಣಮಂತ ಚವ್ಹಾಣ (54) ಎಂದು ಗುರ್ತಿಸಲಾಗಿದೆ. ಈತ ಮದ್ಯವ್ಯಸನಿಯಾಗಿದ್ದು ಮಂಗಳವಾರ ರಾತ್ರಿ ಕುಡಿದ ಅಮಲಿನಲ್ಲೇ ಚರಂಡಿಗೆ ಬಿದ್ದಿದ್ದಾನೆ.

ಬೆಳಿಗ್ಗೆ ರಸ್ತೆಯಲ್ಲಿ ಸಂಚರಿಸುವವರಿಗೆ ಚರಂಡಿಯಲ್ಲಿ ತಲೆಯೊಂದು ಕಂಡುಬಂದು ಸಮೀಪಕ್ಕೆ ಹೋಗಿ ನೋಡಿದಾಗ ಇದು ಬೆಳಕಿಗೆ  ಬಂದಿದೆ. ಇನ್ನೂ ಜೀವ ಇರಬಹುದು ಎಂದು ಭಾವಿಸಿ ದಾರಿಹೋಕರೇ ಶವವನ್ನು ಚರಂಡಿಯಿಂದ ಮೇಲೆತ್ತಿ ಪಕ್ಕದಲ್ಲಿ ಮಲಗಿಸಿದಾಗಲೇ ಸಾವನ್ನಪ್ಪಿರುವುದು ಗೊತ್ತಾಗಿದೆ.

ಚರಂಡಿಯ ಕೊಳಚೆ ನೀರಿಗೆ ಉಸಿರುಗಟ್ಟಿ ಅಥವಾ ತಲೆಗೆ ಪೆಟ್ಟಾಗಿ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಮೃತನ ಕಿರಿಯ ಸಹೋದರ ತಾಪಂ ಮಾಜಿ ಸದಸ್ಯ ಪ್ರೇಮಸಿಂಗ್ ಚವ್ಹಾಣ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಬಂದರು. ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next