Advertisement

ಅಮಾನವೀಯ:ಮೊಬೈಲ್‌ ಕದ್ದವನಿಗೆ ಉಲ್ಟಾ ನೇತು ಹಾಕಿ  ಥಳಿತ !!

03:26 PM Sep 24, 2017 | Team Udayavani |

ಮೈಸೂರು : ನರದಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕನೊಬ್ಬನಿಗೆ ತಲೆ ಕೆಳಗೆ ಮಾಡಿ ನೇತು ಹಾಕಿ ಹಿಗ್ಗಾಮುಗ್ಗಾ ಥಳಿಸಲಾಗಿದೆ.

Advertisement

ಆರ್‌ಟಿಓ ರಸ್ತೆಯಲ್ಲಿನ ಡಬಲ್‌ಟ್ಯಾಂಕ್‌ ವೃತ್ತದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಕಟ್ಟಡ ಕಾಮಗಾರಿ ಮಾಡುತ್ತಿದ್ದ ಮೇಸ್ತ್ರೀ ಇತರರೊಂದಿಗೆ ಸೇರಿ ಕಾರ್ಮಿಕನನ್ನು ತಲೆ ಕೆಳಗೆ ಮಾಡಿ ಕಟ್ಟಿ ಥಳಿಸಿದ್ದಾನೆ. ಎಷ್ಟೇ ಬೊಬ್‌ಬಿಟ್ಟರೂ ಕೇಳದೆ ಅಮಾನವೀಯ ಶಿಕ್ಷೆ ನೀಡಿದ್ದಾರೆ. 

ಮೊಬೈಲ್‌ ಕದ್ದಿದ್ದಾನೆ ಎಂಬ ಆರೋಪದಲ್ಲಿ  ಥಳಿಸಲಾಗಿದೆ ಎಂದು ತಿಳಿದು ಬಂದಿದೆ. 

ಈ ದೃಶ್ಯವನ್ನು ಪಕ್ಕದ ಕಟ್ಟಡದಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರಿಕರಿಸಿ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟಿದ್ದು , ವಿಡಿಯೋ ಇದೀಗ ವೈರಲ್‌ ಆಗಿದೆ. ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. 

ಯಾವುದೇ ಪ್ರಕರಣ ದಾಖಲಾದ ಬಗ್ಗೆ ಇದುವರೆಗೆ ವರದಿಯಾಗಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next