Advertisement

ದಿಲ್ಲಿ: ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿ,ವ್ಯಕ್ತಿ ಸುಟ್ಟು ಕರಕಲು

03:30 PM Aug 11, 2018 | Team Udayavani |

ಹೊಸದಿಲ್ಲಿ : ದಿಲ್ಲಿಯ ಅಂಬೇಡ್ಕರ್‌ ನಗರ ಪ್ರದೇಶದಲ್ಲಿ  ಇಂದು ಶನಿವಾರ ನಸುಕಿನ ವೇಳೆ ಚಲಿಸುತ್ತಿದ್ದ ಕಾರು ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಅದರೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾದ ದುರ್ಘ‌ಟನೆ ವರದಿಯಾಗಿದೆ.

Advertisement

ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಫೋನ್‌ ಕರೆ ನಸುಕಿನ 1.50ರ ಹೊತ್ತಿಗೆ ದಿಲ್ಲಿ ಅಗ್ನಿ ಶಾಮಕ ದಳಕ್ಕೆ ಬಂದೊಡನೆಯೇ ಸಿಬಂದಿ ಅಲ್ಲಿಗೆ ಧಾವಿಸಿದರು. ಅದಾಗಲೇ ಕಾರು ಸುಟ್ಟು ಭಸ್ಮವಾಗಿತ್ತು ಮತ್ತು ಅದರೊಳಗಿದ್ದಾತ ಸುಟ್ಟು ಕರಕಲಾಗಿದ್ದ ಎಂದು ಮೂಲಗಳು ತಿಳಿಸಿವೆ. 

ವೇಗವಾಗಿ ಸಾಗುತ್ತಿದ್ದ ಯಾವುದೋ ಇನ್ನೊಂದು ವಾಹನ ಈ ಕಾರಿಗೆ ಢಿಕ್ಕಿ ಹೊಡೆದಿರಬಹುದಾದ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿರಬಹುದೆಂದು ತನಿಖಾ ತಂಡ ಶಂಕಿಸಿದೆ. ಕಾರಿನಲ್ಲಿ ಪೇಪರ್‌ ಮೂಟೆಯನ್ನು ಸಾಗಿಸಲಾಗುತ್ತಿತ್ತು.

ಕಳೆದ ಜು.18ರಂದು ಗುಜರಾತಿನ ಟಂಕಾರಾ ಪಟ್ಟಣಕ್ಕೆ ಸಮೀಪ ರಾಜ್‌ಕೋಟ್‌ – ಮೋರ್ಬಿ ಹೈವೇಯಲ್ಲಿ ಕಾರೊಂದು ಟ್ರಕ್ಕಿಗೆ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದ ಅವಘಡದಲ್ಲಿ ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟು ಇನ್ನೋರ್ವರು ಗಾಯಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next