Advertisement

ಬಾನೆಟ್‌ ಮೇಲೆ ಗಾಯಾಳು ಇರಿಸಿಕೊಂಡು ಕಾರು ಓಡಿಸಿದ!

11:31 PM Feb 13, 2022 | Team Udayavani |

ನವದೆಹಲಿ: ಆತ ಸರ್ಕಾರಿ ಅಧಿಕಾರಿಯೊಬ್ಬರ ಪುತ್ರ. ಇತ್ತೀಚೆಗೆ ಕಾರು ಓಡಿಸುವ ಭರದಲ್ಲಿ ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದ. ಆದರೆ, ಅಷ್ಟಕ್ಕೆ ಬಿಡದ ಆತ, ಕಾರು ಇಳಿದು ಬಂದು ಗಾಯಗೊಂಡಿದ್ದ ಆ ಪಾದಚಾರಿಯನ್ನು ತನ್ನ ಕಾರಿನ ಬಾನೆಟ್‌ ಮೇಲೆ ಹಾಕಿ, ಆ ಕಾರನ್ನು ಡ್ರೈವ್‌ ಮಾಡಿಕೊಂಡು ಪಂಚತಾರಾ ಹೋಟೆಲೊಂದಕ್ಕೆ ಹೋದ!

Advertisement

ದಕ್ಷಿಣ ದೆಹಲಿಯ ಗ್ರೇಟರ್‌ ಕೈಲಾಶ್‌ನಲ್ಲಿ ಈ ಘಟನೆ ನಡೆದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಅಪಘಾತದ ದೃಶ್ಯಗಳು ದಾಖಲಾಗಿದ್ದು, ಅವುಗಳ ಆಧಾರದಲ್ಲಿ ಆತನ ವಿರುದ್ಧ ಪ್ರಕರಣದ ದಾಖಲಾಗಿವೆ.

ಈ ಯುವಕ ಖಾಸಗಿ ವಿವಿಯಲ್ಲಿ ಕಾನೂನು ಪದವಿ ಕಲಿಯುತ್ತಿದ್ದಾನೆ ಎಂದು ದಕ್ಷಿಣ ದೆಹಲಿಯ ಡಿಸಿಪಿ ಬೇನಿತಾ ಮೇರಿ ಜೈಕರ್‌ ತಿಳಿಸಿದ್ದಾರೆ. ಕೆಲವೊಂದು ವರದಿಗಳ ಪ್ರಕಾರ ಕಾರ್‌ನಲ್ಲಿ ವಿದ್ಯಾರ್ಥಿಯ ತಂದೆಯೂ ಇದ್ದರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next