Advertisement

ಪತ್ನಿಯ ತಲೆ ಕಡಿದು ಪೊಲೀಸ್‌ ಠಾಣೆಗೆ ಒಯ್ದು ಶರಣಾದ ಪತಿರಾಯ

04:02 PM Jun 12, 2017 | udayavani editorial |

ಲಖೀಂಪುರ ಖೇರಿ : ಅತ್ಯಂತ ಭಯಾನಕ ಹಾಗೂ ಆಘಾತಕಾರಿ ಘಟನೆಯೊಂದರಲ್ಲಿ  ವ್ಯಕ್ತಿಯೋರ್ವ ತನ್ನ ಐವತ್ತರ ಹರೆಯದ ಪತ್ನಿಯ ಶಿರಚ್ಛೇದನ ಮಾಡಿ ಆಕೆಯ ತಲೆಯನ್ನು  ಕೈಯಲ್ಲಿ  ಹಿಡಿದುಕೊಂಡು ಸಮೀಪದ ಪೊಲೀಸ್‌ ಠಾಣೆಗೆ ಒಯ್ದು ಅಲ್ಲಿ  ಶರಣಾಗಿದ್ದಾನೆ.

Advertisement

ಜಿಲ್ಲೆಯ ಬೆಹಜಾಮ್‌ ಎಂಬ ಗ್ರಾಮದ ನಿವಾಸಿ ರಾಮ ಸೇವಕ್‌ 52 ಮತ್ತು ಆತನ ಪತ್ನಿ ಉಷಾ ದೇವಿ ಇಂದು ಬೆಳಗ್ಗೆ ತಮ್ಮ ಹೊಲಕ್ಕೆ ಹೋಗಿದ್ದರು. ಅಲ್ಲಿ ಯಾವುದೋ ಕಾರಣಕ್ಕೆ ಪರಸ್ಪರಿಗೆ ಜೋರಾಗಿ ಜಗಳವಾಗಿದೆ.

ಸಿಟ್ಟಿನ ಪರಾಕಾಷ್ಠೆಯಲ್ಲಿ ರಾಮ ಸೇವಕ್‌ ಮಚ್ಚಿನಿಂದ ಪತ್ನಿಯ ಶಿರಚ್ಛೇದನ ಮಾಡಿದ್ದಾನೆ ಮತ್ತು ದೇಹದಿಂದ ಬೇರ್ಪಟ್ಟ ಆಕೆಯ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಸಮೀಪದ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ನೀಮ್‌ಗಾಂವ್‌ ಪೊಲೀಸ್‌ ಠಾಣಾಧಿಕಾರಿ ಡಿ ಕೆ ಸಿಂಗ್‌ ತಿಳಿಸಿದ್ದಾರೆ. 

ಪತ್ನಿಯ ತಲೆ ಕಡಿದು ಕೊಂದ ರಾಮ್‌ ಸೇವಕ್‌ನ ವಿರುದ್ಧ ಕೊಲೆ ಕೇಸನ್ನು ದಾಖಲಿಸಲಾಗಿದೆ; ಆತನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಸಿಂಗ್‌ ಹೇಳಿದ್ದಾರೆ. 

ಗ್ರಾಮಸ್ಥರು ಹೇಳುವ ಪ್ರಕಾರ ರಾಮ್‌ ಸೇವಕ್‌ ಮಾನಸಿಕವಾಗಿ ಅಸ್ಥಿರ ವ್ಯಕ್ತಿಯಾಗಿದ್ದು ಈ ಹಿಂದೆ ಆತ ತನ್ನ ಸಹೋದರನನ್ನು ಕೊಲ್ಲಲು ಅಟ್ಟಿಸಿಕೊಂಡು ಹೋಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next