Advertisement

ಠಾಣೆಗೆ ಬಂತು ಮತ್ತೊಂದು ರುಂಡ !!; ಬೆಚ್ಚಿ ಬಿದ್ದ ಮಂಡ್ಯದ ಜನತೆ 

11:10 AM Sep 29, 2018 | |

ಮಂಡ್ಯ: ಚಿಕ್ಕಮಗಳೂರು, ಚಿಂತಾಮಣಿಯಲ್ಲಿ  ಪತ್ನಿಯರ ರುಂಡಗಳನ್ನು ಕತ್ತರಿಸಿ ಠಾಣೆಗೆ ತಂದ ಘಟನೆ ಬೆನ್ನಲ್ಲೇ ಮಳವಳ್ಳಿಯ ಚಿಕ್ಕೆಬಾಗಿಲು ಗ್ರಾಮದಲ್ಲಿ  ವ್ಯಕ್ತಿಯೊಬ್ಬ ಸ್ನೇಹಿತನ ರುಂಡವನ್ನು ಚೆಂಡಾಡಿ ಠಾಣೆಗೆ ತಂದ ಭೀಭತ್ಸ  ಘಟನೆ ಶನಿವಾರ ನಡೆದಿದೆ. 

Advertisement

ಗಿರೀಶ್‌ ಎಂಬ 25 ವರ್ಷದ ಯುವಕ ಹತ್ಯೆಗೀಡಾಗಿದ್ದು , ಆರೋಪಿ ಪಶುಪತಿ ಹತ್ಯೆ ಮಾಡಿದ ವ್ಯಕ್ತಿ . ಇಬ್ಬರೂ ಅಕ್ಕ ಪಕ್ಕದ ನಿವಾಸಿಗಳೆಂದು ತಿಳಿದು ಬಂದಿದೆ. 

ತಾಯಿಗೆ ಬಯ್ದಿದ್ದಾನೆ ಎಂಬ ಕಾರಣಕ್ಕೆ ಮನೆ ಬಳಿಗೆ ಬಂದು ಬೇರೇಡೆ ಕರೆದೊಯ್ದು ಬರ್ಬರವಾಗಿ ಹತ್ಯೆಗೈದಿದ್ದಾನೆ. 

ಹತ್ಯೆಗೈದ ಬಳಿಕ ರುಂಡ ಹಿಡಿದುಕೊಂಡು ಬೈಕ್‌ ಏರಿ 20 ಕಿ.ಮೀ ದೂರದಲ್ಲಿರುವ ಬೆಳಕವಾಡಿ ಠಾಣೆಗೆ ಪಶುಪತಿ ಬಂದಿದ್ದಾನೆ. ಪೊಲೀಸರೇ ದೃಶ್ಯವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. 

ಕೂಡಲೇ ಪ್ರಕರಣ ದಾಖಲಿಸಿಕೊಂಡು ಹತ್ಯೆಗೈದ ಸ್ಥಳ ಮಹಜರು ನಡೆಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next