Advertisement

Sandalwood: ಶ್ರೀಗಂಧ ಕೊರಡು ಸಹಿತ ಬಂಧನ

10:37 AM Mar 21, 2024 | Team Udayavani |

ಕಾಸರಗೋಡು: ಸ್ಕೂಟರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 5.5 ಕಿಲೋ ಶ್ರೀಗಂಧ ಕೊರಡುಗಳನ್ನು ಚುನಾವಣ ಫ್ಲೈಯಿಂಗ್‌ ಸ್ಕ್ವ್ಯಾಡ್‌ ವಶ ಪಡಿಸಿಕೊಂಡಿದ್ದು, ಈ ಸಂಬಂಧ ಮುಳಿಯಾರು ಬಾವಿ ಕೆರೆಯ ಕೆ.ಮೂಸಾ (32) ಎಂಬಾತನನ್ನು ಬಂಧಿಸಿದೆ.

Advertisement

ಹೊಸದುರ್ಗ ಮಡಿಕೈ ವಾಚ್ಚಿಕ್ಕಾನದಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಪ್ಲೈಯಿಂಗ್‌ ಸ್ಕ್ವ್ಯಾಡ್‌ ಸೆಕ್ಟರ್‌ ನ ಮ್ಯಾಜಿಸ್ಟ್ರೇಟ್‌ ಹಾಗೂ ಕಯ್ಯೂರು-ಚೀಮೇನಿ ಪಂಚಾಯತ್‌ ಕಾರ್ಯದರ್ಶಿ ರಮೇಶನ್‌, ಅರಣ್ಯ ಅಧಿಕಾರಿಗಳು ಮತ್ತು ನೀಲೇಶ್ವರ ಎಸ್‌ಐ ಕೆ.ವಿ. ಮಧುಸೂದನನ್‌ ನೇತೃತ್ವದಲ್ಲಿ ಶ್ರೀಗಂಧ ವಶಪಡಿಸಲಾಯಿತು.

ಸ್ಕೂಟರ್‌ ಹಾಗೂ ಶ್ರೀಗಂಧದ ಮರಗಳನ್ನು ಕಡಿಯಲು ಬಳಸಲಾದ ಮೂರು ಕೊಡಲಿಗಳು, ಗರಗಸ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next