Advertisement

ಒಡಿಶಾದ ಯುವಕನ ಬಂಧನ; 10,925 ರೂ.ಗಳ ಸೊತ್ತುಗಳವಶ

03:45 AM Jan 29, 2017 | |

ಮಂಗಳೂರು: ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಶನಿವಾರ ಗಾಂಜಾ ಮಾರಾಟ ಮಾಡುತ್ತಿದ್ದ  ಒಡಿಶಾದ ಬಾಲೆಸರ್‌ ಜಿಲ್ಲೆಯ ತನ್ವಿರ್‌ ಖಾನ್‌ (21) ನನ್ನು ಬರ್ಕೆ ಪೊಲೀಸರು ಬಂಧಿಸಿ ಆತನಿಂದ 437 ಗ್ರಾಂ ಗಾಂಜಾ, 1 ಮೊಬೈಲ್‌ ಫೋನ್‌ ಮತ್ತು 250 ರೂ. ನಗದು ಸಹಿತ ಒಟ್ಟು  10,925 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
 
ಬಸ್‌ ನಿಲ್ದಾಣದ ಬಳಿಯ ಕಾರು ಪಾರ್ಕಿಂಗ್‌ನಲ್ಲಿ  ವ್ಯಕ್ತಿಯೊಬ್ಬ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ  ಪೊಲೀಸರು ದಾಳಿ ನಡೆಸಿದರು. 
 
ಎಸಿಪಿ ಉದಯ ನಾಯಕ್‌ ಅವರ ಆದೇಶದಂತೆ ನಡೆದ ಕಾರ್ಯಾಚರಣೆಯಲ್ಲಿ ಬರ್ಕೆ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಜೇಶ್‌ ಎ.ಕೆ. ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನರೇಂದ್ರ ಮತ್ತು ಸಿಬಂದಿ ರಾಜೇಶ್‌ ಆಳ್ವ, ಗಣೇಶ್‌, ರಾಜೇಶ್‌ ಅತ್ತಾವರ, ಕಿಶೋರ್‌ ಕೋಟ್ಯಾನ್‌, ಜಯರಾಂ, ಕಿಶೋರ್‌ ಪೂಜಾರಿ, ನಾಗಪ್ಪ, ನಾಗರಾಜ್‌, ಮಹೇಶ್‌ ಪಾಟೀಲ್‌ ಅವರು ಭಾಗವಹಿಸಿಸಿದ್ದರು.  ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next