Advertisement

ಕೊಳ್ಳೇಗಾಲ: ಆಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

10:40 PM Jun 10, 2022 | Team Udayavani |

ಕೊಳ್ಳೇಗಾಲ: ಆಕ್ರಮವಾಗಿ ಒಣಗಿದ ಗಾಂಜದ ಎಲೆಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಮತ್ತಿಪುರ ಗ್ರಾಮದ ತಿರುವಿನಲ್ಲಿ ಬಂದಿಸಿದ್ದಾರೆ.

Advertisement

ತಾಲೂಕಿನ ಬೆಳಗುಣಸೆ ಗ್ರಾಮದ ರಾಚಯ್ಯ (44) ಎಂಬಾತ ಒಣಗಿದ ಗಾಂಜದ ಎಲೆ ಮಾರಾಟ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ. ಆರೋಪಿ ಬಳಿ ಇದ್ದ 50 ಗ್ರಾಂ ಒಣಗಿದ ಗಾಂಜಾದ ಎಲೆ ಮತ್ತು ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿರುವ ಗ್ರಾಮಾಂತರ ಪೊಲೀಸ್ ರಾಣೆಯ ಪಿಎಸ್ಐ ಮಂಜುನಾಥ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದು, ದಾಳಿಯಲ್ಲಿ ಸಿಬ್ಬಂದಿಗಳಾದ ಲಿಂಗ ರಾಜ್, ವಿರೇಂದ್ರ, ರವಿ,ಮಹೇಶ್, ಶಂಕರ ಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next