Advertisement

ಸೋಮವಾರಪೇಟೆ: ತಾಯಿ, ಮಗಳ ಕೊಲೆ ಆರೋಪಿ ಸೆರೆ

10:38 AM May 03, 2019 | keerthan |

ಸೋಮವಾರಪೇಟೆ: ಇಲ್ಲಿಗೆ ಸಮೀಪದ ದೊಡ್ಡಮಳೆ ಗ್ರಾಮದಲ್ಲಿ ತಾಯಿ ಮತ್ತು ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ, ದೊಡ್ಡಮಳೆ ಗ್ರಾಮದ ದಿಲೀಪ್‌(39)ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.

Advertisement

ಆಸ್ತಿಯ ವಿವಾದದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಮಂಗಳವಾರ ಬೆಳಗ್ಗಿನ ಜಾವ 10.30ರ ಸಮಯದಲ್ಲಿ ಕಾಫಿ ತೋಟದ ಗೇಟ್‌ ಸಮೀಪ ನಿಂತಿದ್ದ ದೊಡ್ಡಮಳೆ¤ ಗ್ರಾಮದ ದಿ| ವೀರರಾಜು ಅವರ ಪತ್ನಿ ಕವಿತಾ (45) ಹಾಗೂ ಆಕೆಯ ಪುತ್ರಿ ಜಗಶ್ರೀ (17) ಅವರನ್ನು ಭೀಕರವಾಗಿ ಕೊಚ್ಚಿ ಕೊಂದಿದ್ದ. ಅನಂತರ ತನ್ನ ಕೋಳಿ ಅಂಗಡಿಗೆ ಬಂದು ಕುಳಿತಿದ್ದ.

ಎಸ್‌ಪಿ ಸುಮನಾ ಡಿ. ಪನ್ನೇಕರ್‌ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ದಿನಕರ ಶೆಟ್ಟಿ, ಸೋಮವಾರಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್‌ ನಂಜುಂಡೇ ಗೌಡ, ಠಾಣಾಧಿಕಾರಿ ಶಿವಶಂಕರ್‌ ತಂಡ ಆರೋಪಿಯನ್ನು ಬಂಧಿಸಿದೆ.

ಪ್ರಕರಣದ ಹಿನ್ನೆಲೆ
ಕವಿತಾರ ಅವರ ಆಸ್ತಿಯ ಸಮೀಪದಲ್ಲೇ ದಿಲೀಪನು ಹೊಸ ಮನೆ ನಿರ್ಮಿಸುತ್ತಿದ್ದಾನೆ. ಇದಕ್ಕೆ ಕವಿತಾರ ಜಾಗದಲ್ಲೇ ದಾರಿಯಿದೆ. ಹಿಂದಿನಿಂದಲೂ ರಸ್ತೆ ವಿಚಾರವಾಗಿ ತಕರಾರು ಇದ್ದು, ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕವಿತಾ ಅವರು ದಿಲೀಪ್‌ ವಿರುದ್ಧ ಈ ಹಿಂದೆ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವೂ ದಾಖಲಾಗಿತ್ತು. ಇದೇ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next