Advertisement

ದೈವನಿಂದನೆ ಆರೋಪ: ಪಾಕ್‌ನಲ್ಲಿ ವ್ಯಕ್ತಿ ಹತ್ಯೆ

07:49 PM Feb 13, 2022 | Team Udayavani |

ಇಸ್ಲಾಮಾಬಾದ್‌/ಲಾಹೋರ್‌: ಪಾಕಿಸ್ತಾನದ ಪಂಜಾಬ್‌ನ ಕುಗ್ರಾಮದಲ್ಲಿ ದೈವ ನಿಂದನೆ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ವ್ಯಕ್ತಿಯನ್ನು ಕಲ್ಲು ಹೊಡೆದು ಸಾಯಿಸಿದ ಘಟನೆ ನಡೆದಿದೆ.

Advertisement

ಆತನ ಮೃತದೇಹವನ್ನು ಕೃತ್ಯವೆಸಗಿದ ಗುಂಪು ಮರಕ್ಕೆ ಕಟ್ಟಿ ನೇತು ಹಾಕಿದ ಹೇಯ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 62 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನದ ಲಾಹೋರ್‌ನಿಂದ 275 ಕಿಮೀ ದೂರದಲ್ಲಿರುವ ಖಾನ್ವೆಲ್‌ ಜಿಲ್ಲೆಯಲ್ಲಿರುವ ಜಂಗಲ್‌ ದೇರಾವಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿ ಕುರಾನ್‌ ಹರಿದು ಹಾಕಿ, ಸುಟ್ಟುಹಾಕಿ ದೈವನಿಂದನೆ ಮಾಡಿದ್ದಾನೆ ಎಂಬ ಆರೋಪವನ್ನು ಹೊರಿಸಲಾಗಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದರೂ, ಉದ್ರಿಕ್ತಗೊಂಡಿದ್ದ 300ಕ್ಕೂ ಅಧಿಕ ಮಂದಿಯ ಗುಂಪು ಆತನನ್ನು ಪೊಲೀಸರ ವಶದಿಂದ ಬಲವಂತವಾಗಿ ಪಡೆದುಕೊಂಡು ಮರಕ್ಕೆ ಕಟ್ಟಿಹಾಕಿ ಕಲ್ಲು ಹೊಡೆಯಿತು. ತೀವ್ರವಾಗಿ ಗಾಯಗೊಂಡ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next