Advertisement

ಪಶ್ಚಿಮ ಬಂಗಾಲದಲ್ಲಿ ಅಸಂಖ್ಯ ರಾಮ ನವಮಿ ರಾಲಿ; ಸಿಎಂ ಮಮತಾ ಸಿಡಿಮಿಡಿ

09:23 AM Apr 14, 2019 | Sathish malya |

ಕೋಲ್ಕತ : ರಾಮ ನವಮಿ ಪ್ರಯುಕ್ತ ಇಂದು ಪಶ್ಚಿಮ ಬಂಗಾಲದ ವಿವಿಧ ಭಾಗಗಳಲ್ಲಿ ಅನೇಕ ರಾಲಿಗಳು, ಕೆಲವೊಂದು ಸಶಸ್ತ್ರ ರಾಲಿಗಳು, ನಡೆಯುತ್ತಿರುವ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

Advertisement

ರಾಮ ನವಮಿ ರಾಲಿಗಳು ಪಶ್ಚಿಮ ಮಿಡ್ನಾಪುರ, ಪುರೂಲಿಯಾ, ಝಾರಗ್ರಾಮ್‌, ಬಂಕುರಾ, ಹೌರಾ, ಕೋಲ್ಕತ ಮತ್ತು ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ನಡೆಯುವುದು ವಾಡಿಕೆ.

ಪಶ್ಚಿಮ ಮಿಡ್ನಾಪುರದ ಖರಗ್‌ಪುರ ದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಅವರ ನೇತೃತ್ವದಲ್ಲಿ ನಡೆದಿರುವ ರಾಮ ನವಮಿ ರಾಲಿಯಲ್ಲಿ ತಲವಾರು, ಕತ್ತಿ, ಖಡ್ಗ ಗಳನ್ನು ಝಳಪಿಸುವುದು ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next