Advertisement

ಮೂರು ದಿನಗಳ ಧರಣಿ ಸತ್ಯಾಗ್ರಹ ಕೊನೆಗೊಳಿಸಿದ ಮಮತಾ ಬ್ಯಾನರ್ಜಿ

01:45 PM Feb 05, 2019 | udayavani editorial |

ಕೋಲ್ಕತ : ದೇಶದ ಸಂವಿಧಾನವನ್ನು ಉಳಿಸುವ ತನ್ನ ಮೂರು ದಿನಗಳ ಧರಣಿ ಸತ್ಯಾಗ್ರಹವನ್ನು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಮಂಗಳವಾರ ಕೊನೆಗೊಳಿಸಿದ್ದಾರೆ.

Advertisement

‘ಈ ಧರಣಿ ಸತ್ಯಾಗ್ರಹವು ಸಂವಿಧಾನ ಮತ್ತು ಪ್ರಜಾಸತ್ತೆಯ ವಿಜಯವಾಗಿದೆ; ಆದುದರಿಂದ ಇದನ್ನು ಇಂದು ಇಲ್ಲಿಗೆ ಕೊನೆಗೊಳಿಸೋಣ’ ಎಂದು ಮಮತಾ ಹೇಳಿದರು. 

ಶಾರದಾ ಚಿಟ್‌ ಫ‌ಂಡ್‌ ಕೇಸಿನಲ್ಲಿ ಕೋಲ್ಕತ ಪೊಲೀಸ್‌ ಮುಖ್ಯಸ್ಥ ರಾಜೀವ್‌ ಕುಮಾರ್‌ ಸಿಬಿಐ ಮುಂದೆ ತನಿಖೆಗೆ ಹಾಜರಾಗಬೇಕೆಂದು ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ಆದೇಶಿಸಿರುವುದನ್ನು ಅನುಸರಿಸಿ ಮಮತಾ ಬ್ಯಾನರ್ಜಿ ತಮ್ಮ ಧರಣಿ ಸತ್ಯಾಗ್ರಹವನ್ನು ಕೊನೆಗೊಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next