Advertisement

ಇಂದಿನಿಂದ ಮತ್ತೆ ಕಡಲಿಗೆ 

04:51 AM Jan 07, 2019 | Team Udayavani |

ಮಲ್ಪೆ: ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಆಳಸಮುದ್ರ ಬೋಟ್‌ಗಳು ಸೋಮವಾರದಿಂದ ಕಡಲಿಗಿಳಿಯುವಂತೆ ರವಿವಾರ ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಜತೆ ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ತಿಳಿಸಿದ್ದಾರೆ. 

Advertisement

ಹಂತ ಹಂತವಾಗಿ ಬೋಟ್‌ಗಳು ಕಡಲಿಗಿಳಿಯಲಿದ್ದು, ಮೊದಲ ಎರಡು ದಿನ ಎಲ್ಲ ಬೋಟ್‌ಗಳು ಮೀನುಗಾರಿಕೆ ನಡೆಸದೆ ಕಡ್ಡಾಯವಾಗಿ ತಮ್ಮ ಬೋಟ್‌ಗಳೊಂದಿಗೆ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯ ನಡೆಸಬೇಕು, ಯಾವುದೇ ಸೂಚನೆಗಳು ದೊರೆತಲ್ಲಿ ತತ್‌ಕ್ಷಣ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಬೇಕೆಂದು ಕೋರಲಾಗಿದೆ.

ಸುಮಾರು 50 ಸಾವಿರ ಮಂದಿ ರವಿವಾರದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಉಪ್ಪಳದಿಂದ ಕಾರವಾರದ ವರೆಗಿನ ಮೀನುಗಾರರಲ್ಲದೆ, ಎಲ್ಲ ಧರ್ಮಗಳ ಬಂಧುಗಳು, ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದು, ಸಹಕರಿಸಿದ ಎಲ್ಲರಿಗೆ ಸಮಸ್ತ ಮೀನುಗಾರರ ಪರವಾಗಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next