Advertisement

ಮಲ್ಪೆ ಬೀಚ್‌: ಸಮುದ್ರದಲ್ಲಿ ಮುಳುಗಿ ಓರ್ವ ಸಾವು, ನಾಲ್ವರ ರಕ್ಷಣೆ

01:00 AM Mar 20, 2019 | Team Udayavani |

ಮಲ್ಪೆ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಪ್ರವಾಸಿಗರನ್ನು ಇಲ್ಲಿನ ಜೀವ ರಕ್ಷಕ ತಂಡದವರು ರಕ್ಷಿಸಿ ದಡಸೇರಿದ್ದು ಅವರಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಮಂಗಳವಾರ ಮಲ್ಪೆ ಬೀಚ್‌ಸಮೀಪ ನಡೆದಿದೆ. ಬೆಂಗಳೂರು ಮೂಲದ ಕೀರ್ತನ್‌ ಸಿಂಹ (22) ಮೃತಪಟ್ಟವರು.

Advertisement

ಬೆಂಗಳೂರಿನಿಂದ ಒಟ್ಟು 30 ಮಂದಿ ಬಸ್ಸಿನಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ಮಂಗಳವಾರ ಬೆಳಗ್ಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ತೆರಳಿ ಅಲ್ಲಿಂದ ಮಧ್ಯಾಹ್ನ 12ರ ವೇಳೆ ಮಲ್ಪೆ ಬೀಚ್‌ಗೆ ಬಂದಿದ್ದರು. ಬೀಚ್‌ನ ಉತ್ತರ ಭಾಗದ ತಡೆಗೋಡೆಗೆ ಕಲ್ಲು ಹಾಕಿರುವ ಸಮೀಪ ಎಲ್ಲರೂ ಸ್ನಾನ ಮಾಡಲು ನೀರಿಗಿಳಿದಿದ್ದರು. ಇವರಲ್ಲಿ ನಾಲ್ವರು ಈಜುತ್ತಾ ಮುಂದೆ ಮುಂದೆ ಹೋಗಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋದರು.  ಸಮೀಪದಲ್ಲಿದ ಜೀವ ರಕ್ಷಕ ತಂಡದವರು ಧಾವಿಸಿ ಬಂದು ನಾಲ್ವರನ್ನು ರಕ್ಷಿಸಿ, 108ರ ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next