Advertisement

ಮಲ್ಯ ಹರಕೆಯ ಕುರಿಯಾಗಲ್ಲ: ಜಡ್ಜ್

11:57 PM Apr 11, 2019 | mahesh |

ಲಂಡನ್‌: ಉದ್ಯಮಿ ವಿಜಯ್‌ ಮಲ್ಯ ಗಡಿಪಾರು ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿ ಯನ್ನು ಸಮ್ಮತಿಸಲು ನಿರಾಕರಿಸಿದ್ದ ಲಂಡನ್‌ ಕೋರ್ಟ್‌ ಜಡ್ಜ್ ವಿಲಿಯಮ್‌ ಡೇವಿಸ್‌, ಭಾರತಕ್ಕೆ ಮಲ್ಯರನ್ನು ಗಡಿಪಾರು ಮಾಡಿದರೆ ಹರಕೆಯ ಕುರಿಯಾಗುತ್ತಾರೆ ಎಂಬ ವಾದ ಹುಸಿ ಎಂದಿ ದ್ದಾರೆ. ಏಪ್ರಿಲ್‌ 5 ರಂದು ಆದೇಶ ಹೊರಡಿ ಸಿರುವ ಜಡ್ಜ್, ಗಡಿಪಾರು ಆದೇಶದ ವಿರುದ್ಧ ಪುನಃ ವಿಚಾರಣೆ ನಡೆಸಲು ನಿರಾಕರಿಸಿ, ಅರ್ಜಿ ತಳ್ಳಿಹಾಕಿದ್ದರು. ಸದ್ಯ ಮಲ್ಯಗೆ ಶುಕ್ರ ವಾರದ ವರೆಗೆ ಮೌಖೀಕ ವಿಚಾರಣೆ ನಡೆಸುವಂತೆ ಕೋರುವ ಅವಕಾಶವಿದೆ. ಒಂದೊಮ್ಮೆ ಮೌಖೀಕ ವಿಚಾರಣೆ ನಡೆಸಲೂ ಕೋರ್ಟ್‌ ಅವಕಾಶ ನೀಡದಿದ್ದರೆ, ಮಲ್ಯ ಎದುರು ಬೇರೆ ಯಾವುದೇ ಕಾನೂನು ದಾರಿ ಇರು ವುದಿಲ್ಲ. ಆಗ ಗಡಿಪಾರು ಮಾಡುವು ದೊಂದೇ ಅವರಿಗೆ ಇರುವ ಆಯ್ಕೆಯಾಗಿರುತ್ತದೆ.

Advertisement

ಇಂಗ್ಲೆಂಡ್‌- ಭಾರತದ ಗಡಿಪಾರು ಒಪ್ಪಂದಕ್ಕೆ ಅನುಗುಣ ವಾಗಿ ಎರಡೂ ದೇಶಗಳು ನಡೆದು ಕೊಳ್ಳಬೇಕು. ಆದರೆ ಹಾಗೆ ನಡೆದುಕೊಳ್ಳುತ್ತಿ ವೆಯೇ ಎಂದು ವಿಚಾರಿಸಲು ಅವಕಾಶವಿಲ್ಲ. ಭಾರತ ಸರಕಾರ ಒಪ್ಪಂದಕ್ಕೆ ಬದ್ಧವಾಗಿರುವುದಿಲ್ಲ ಎಂದು ಸಾಬೀತುಪಡಿಸಲು ಸೂಕ್ತ ಆಧಾರಗಳಿಲ್ಲ ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next