Advertisement

Mallikarjuna Kharge: ಗಾಂಧಿ ಸೇರಿ ಪ್ರಮುಖರ ಪ್ರತಿಮೆ ಹಿಂದಿನಂತೆಯೇ ಇರಲಿ: ಖರ್ಗೆ ಆಗ್ರಹ

09:41 AM Jun 20, 2024 | |

ಹೊಸದಿಲ್ಲಿ: ಸಂಸತ್‌ ಆವರಣದಲ್ಲಿದ್ದ ಮಹಾತ್ಮಾ ಗಾಂಧಿ, ಶಿವಾಜಿ, ಬಿ.ಆರ್‌. ಅಂಬೇಡ್ಕರ್‌ ಸೇರಿ ಹಲವರ ಪ್ರತಿಮೆಗಳನ್ನು ಸ್ಥಳಾಂತರಿಸಿದ್ದಕ್ಕೆ ಕಾಂಗ್ರೆಸ್‌ ಆಕ್ಷೇಪಿಸಿದೆ. ಅವುಗಳನ್ನು ಮರಳಿ ಮೊದಲಿನ ಸ್ಥಾನದಲ್ಲಿ ಅಳವಡಿಸಬೇಕೆಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಲೋಕಸಭೆ ಸ್ಪೀಕರ್‌, ರಾಜ್ಯಸಭೆ ಸಭಾಪತಿಗೆ ಪತ್ರ ಬರೆದಿದ್ದಾರೆ. ಈ ರೀತಿಯ ಕಾರ್ಯಗಳನ್ನು ಎರಡೂ ಸದನಗಳ ಸದಸ್ಯರ ಸಮಿತಿ ನಿರ್ಧರಿಸಬೇಕು. ಆದರೆ 2019ರಿಂದ ಈ ಸಮಿತಿ ರಚನೆಯೇ ಆಗಿಲ್ಲ. ಕೇಂದ್ರ ಯಾರ ಸಲಹೆಯನ್ನೂ ಪಡೆಯದೆ, ಈ ನಿರ್ಧಾರ ತೆಗೆದುಕೊಂಡಿದೆ. ಪ್ರತಿಮೆಗಳನ್ನು ಅವುಗಳು ಮೊದಲಿದ್ದ ಸ್ಥಾನದಲ್ಲಿಯೇ ಮರಳಿ ಸ್ಥಾಪಿಸಬೇಕೆಂದು ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Narendra Modi: ಇಂದು ಕಾಶ್ಮೀರಕ್ಕೆ ಪಿಎಂ ಮೋದಿ… ನಾಳೆ ಯೋಗ ದಿನಾಚರಣೆಯಲ್ಲಿ ಭಾಗಿ

Advertisement

Udayavani is now on Telegram. Click here to join our channel and stay updated with the latest news.

Next