Advertisement

ಸಿದ್ದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೆ ತಪ್ಪಿಲ್ಲ: ಖರ್ಗೆ 

06:50 AM Apr 23, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಿಂದ ಸ್ಪರ್ಧಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಅದು ಹೈಕಮಾಂಡ್‌ ನಿರ್ಧಾರವಾಗಿದ್ದು,
ಎರಡೂ ಕಡೆ ಸಿದ್ದರಾಮಯ್ಯ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಮ್ಮನಕಟ್ಟಿಯವರ ಆರೋಗ್ಯ ಸರಿಯಿಲ್ಲದ ಕಾರಣ ಅವರೊಂದಿಗೆ ಪಕ್ಷ ಮಾತುಕತೆ ನಡೆಸಿತ್ತು. ತಮಗೆ ಟಿಕೆಟ್‌ ನೀಡಬೇಕು ಇಲ್ಲದಿದ್ದರೆ ಮುಖ್ಯಮಂತ್ರಿ ಸ್ಪರ್ಧಿಸಬೇಕು ಎಂದು ಮನವಿ ಮಾಡಿದ್ದರು. ಆ ಕ್ಷೇತ್ರದ ಜನರು ಸಹ ಇದನ್ನೇ ಬಯಸಿದ್ದಾರೆ. ಪರಿಸ್ಥಿತಿ ಹೀಗಿರುವುದರಿಂದ ಸಿದ್ದರಾಮಯ್ಯ ಅವರು ಎರಡು ಕಡೆ ಸ್ಪರ್ಧಿಸುತ್ತಿದ್ದಾರೆ. ಹಿಂದೆ ಮೋದಿಯವರು ಎರಡು ಕ್ಷೇತ್ರದಿಂದ ಸ್ಪರ್ಧಿಸಿದಾಗ ಈ ಪ್ರಶ್ನೆ ಉದ್ಭವಿಸಿತ್ತೇ ಎಂದು ಪ್ರಶ್ನಿಸಿದರು.

ಮುಂದೆ ಕಾಂಗ್ರೆಸ್‌ ಸರ್ಕಾರ ಬಂದರೆ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, “ಇದೊಂದು ಕಾಲ್ಪನಿಕ ಪ್ರಶ್ನೆ. ರಾಜ್ಯದವರು 100 ಮಂದಿ ಬೇಡವೆಂದರೂ ಹೈಕಮಾಂಡ್‌ ಬಯಸಿದರೆ ರಾಜ್ಯಕ್ಕೆ ಕಳುಹಿಸಬಹುದು. ಹಾಗೆಯೇ 100 ಮಂದಿ ಬೇಕೆಂದರೂ ಹೈಕಮಾಂಡ್‌ ಕಳುಹಿಸದೆ ಇರಬಹುದು’ಎಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next