Advertisement

ಹಿರಿಯ ಸಾಹಿತಿ ಮಳಿಯಪ್ಪ ಪತ್ತಾರ ನಿಲೋಗಲ್ ಹೃದಯಾಘಾತದಿಂದ ನಿಧನ

08:18 PM Dec 15, 2021 | Team Udayavani |

ಕುಷ್ಟಗಿ: ಶಿಕ್ಷಣ ಸಾಹಿತ್ಯ, ಜಾನಪದ ವೈದ್ಯಕೀಯ ತ್ರಿವಿಧ ಸೇವೆಯಿಂದ ಗುರುತಿಸಿಕೊಂಡಿದ್ದ ಕುಷ್ಟಗಿ ತಾಲೂಕಿನ ಹಿರಿಯ ಸಾಹಿತಿ ಮಳಿಯಪ್ಪ ಎಂ ಪತ್ತಾರ ನಿಲೋಗಲ್ ತಮ್ಮ ಕಂದಕೂರು ನಿವಾಸದಲ್ಲಿ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗ 86 ವಯಸ್ಸಾಗಿತ್ತು.

Advertisement

ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಮಳಿಯಪ್ಪ ಪತ್ತಾರ, 8ನೇ ಮೇ 1937ರಲ್ಲಿ ಬಸಪ್ಪ, ಮಾನಪ್ಪ ಪತ್ತಾರ ಮಗನಾಗಿ ಜನಿಸಿದರು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಗೀಳು ಹಚ್ಚಿಕೊಂಡಿದ್ದ ಗೆಳೆತನದ ಫಲ ನಾಟಕ ಬರೆದು ಸೈ ಎನಿಸಿಕೊಂಡಿದ್ದರು. 30-10-1961ರಲ್ಲಿ ಕಂದಕೂರು ಗ್ರಾಮದ ಶಿಕ್ಷಕರಾಗಿ ನೇಮಕಗೊಂಡಿದ್ದ ಅವರು ನಂತರ ಲಿಂಗಸುಗೂರು ತಾಲೂಕಿನಲ್ಲಿ ಮಲ್ಲಾಪೂರದಲ್ಲಿ 1968ರಿಂದ 1972ರವರೆಗೆ ಸೇವೆ ಸಲ್ಲಿಸಿ ಮತ್ತೆ ಕಂದಕೂರು ಗ್ರಾಮದಲ್ಲಿ ಶಿಕ್ಷಣ ಸೇವೆ ಮುಂದುವರಿಸಿದರು. ನಂತರ ಗಂಗಾವತಿ ತಾಲೂಕಿನ ಕುಂಟೋಜಿ, ಕುಷ್ಟಗಿ ತಾಲೂಕಿನ ಪರಸಾಪೂರ ಶಾಲೆಯಲ್ಲಿ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕರಾಗಿ ಕುರಬನಾಳ ಗ್ರಾಮದಲ್ಲಿ ನಿವೃತ್ತರಾಗಿದ್ದರು. ಅವರು ಶಿಕ್ಷಕ ಸೇವೆಯ ಜೊತೆಗೆ, ಸಾಹಿತ್ಯ ಸೇವೆ ಹಾಗೂ ಜಾನಪದ ವೈದ್ಯರಾಗಿ ತ್ರಿವಿಧ ಸೇವೆ ಸಲ್ಲಿಸಿದ್ದ ಅವರು, ಇವರು ನೀಡುವ ಮೂಲವ್ಯಾದಿಗೆ ಉಚಿತ ಔಷಧಕ್ಕೆ ಮನೆ ಮಾತಾಗಿದ್ದರು. 1972ರಲ್ಲಿ ಗ್ರಾಮಸ್ಥರೊಬ್ಬರಿಗೆ ಮೂಲವ್ಯಾದಿ ಗುಣಪಡಿಸಿದ ಹಿನ್ನೆಲೆಯಲ್ಲಿ 5 ಎಕರೆ ಜಮೀನು ನೀಡಿದ್ದರು. ಗುಣಮುಖರಾಗಿದ್ದ ತಹಶೀಲ್ದಾರ ಕೊಳವೆಬಾವಿ ಹಾಕಿಸಿ ಧನ್ಯತೆ ಮೆರೆದಿದ್ದರು.

ಸಾಹಿತ್ಯ ಕೃಷಿ:

ಗೆಳೆತನ ಫಲ (ನಾಟಕ), ಅಂತರ್ಜ್ಯೋತಿ, ಆದ್ಯಾತ್ಮ ವಿದ್ಯಾಲಯಮ ಶ್ರೀ ಸಿದ್ದರೂಢ ಸ್ವಾಮಿಗಳ ಕವನ, ವೇದಾಂತ ವಚನಸಾರ, ಮಹಾಭೋಧಾಲಯ, ಶ್ರೀ ರಾಘವಾನಂದ ಅವಧೂತ ಪುರಾಣ, ದಿಡ್ಡಿ ಬಾಗಿಲು, ಪಣ ತೊಟ್ಟ ಪ್ರಕಾಶ, ಭಾರತಿ ಸುತ ನಾಟಕಗಳನ್ನು ರಚಿಸಿದ್ದರು. 2016ರಲ್ಲಿ ತಳವಗೇರಾದಲ್ಲಿ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕನ್ನಡ ಸಾಹಿತ್ಯ ಪರಿಷತ್ ಗೌರವಿಸಿತ್ತು.

ಮಳಿಯಪ್ಪ ಪತ್ತಾರ ಅವರು ಪತ್ನಿ ಸೇರಿದಂತೆ ಪುತ್ರ ರವೀಂದ್ರ ಪತ್ತಾರ ಸೇರಿದಂತೆ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಕಂದಕೂರು ಗ್ರಾಮದಲ್ಲಿ ಗುರುವಾರ ಮದ್ಯಾಹ್ನ 11ಕ್ಕೆ ನೆರವೇರಲಿದೆ.

Advertisement

ಸಂತಾಪ:

ಅವರ ಅಗಲಿಕೆಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ, ಹಸನಸಾಬ್ ದೋಟಿಹಾಳ, ಶೇಖರಗೌಡ ಮಾಲಿಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಸದಸ್ಯರ ಅಮಾನತು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕ; ಡಿಕೆಶಿ

Advertisement

Udayavani is now on Telegram. Click here to join our channel and stay updated with the latest news.

Next