Advertisement

ಡೆಂಘೀ ನಿಯಂತ್ರಣಕ್ಕೆ ಸಹಕರಿಸಿ

06:52 PM Jun 07, 2020 | Naveen |

ಮಲೇಬೆನ್ನೂರು: ಡೆಂಘೀ ಜ್ವರ ನಿಯಂತ್ರಣಕ್ಕಾಗಿ ಆಶಾ ಕಾರ್ಯಕರ್ತರು ಪಟ್ಟಣದ ಎಲ್ಲಾ ವಾರ್ಡ್‌ಗಳ ಮನೆ ಮನೆಗೆ ಭೇಟಿ ನೀಡಿ ಲಾರ್ವ ಸಮೀಕ್ಷೆ ನಡೆಸುತ್ತಿದ್ದು, ಅವರಿಗೆ ಸಹಕರಿಸುವಂತೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ| ಲಕ್ಷ್ಮೀ ದೇವಿ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Advertisement

ಡೆಂಘೀ ಜ್ವರಕ್ಕೆ ಕಾರಣವಾಗುವ ಸೊಳ್ಳೆ ಮೊಟ್ಟ ಇಡುವ ಜಾಗವನ್ನು ಗುರುತಿಸುವ ಕಾರ್ಯವೇ ಲಾರ್ವ ಸಮೀಕ್ಷೆಯಾಗಿದ್ದು, ಮಲೇಬೆನ್ನೂರಿನಲ್ಲಿ 2016ರಲ್ಲಿ ಡೆಂಘೀ ಜ್ವರದ ಕೇಸುಗಳು ಹೆಚ್ಚು ಇದ್ದವು. ಸತತವಾಗಿ ಲಾರ್ವ ಸಮೀಕ್ಷೆ ಮಾಡುತ್ತಿರುವುದರಿಂದ ಡೆಂಘೀ ಜ್ವರದ ನಿಯಂತ್ರಣಕ್ಕೆ ಸಾಧ್ಯವಾಗುತ್ತಿದೆ. ಸಾರ್ವಜನಿಕರು ನೀರು ಶೇಖರಿಸಿಟ್ಟಿರುವ ತಾಣಗಳನ್ನು ಪರೀಕ್ಷೀಸಲು ಆಶಾ ಕಾರ್ಯಕರ್ತರು ಮನೆ ಮನೆಗೆ ಬಂದಾಗ ಅವರಿಗೆ ಸಹಕರಿಸಬೇಕು ಇದರಿಂದ ಡೆಂಘೀ ಹರಡದಂತೆ ತಡೆಯಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next